ಬಾಗಲಕೋಟೆ:‘ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಅದ್ಭುತ ಕಲಾವಿದೆ ಅವರ ಬಗ್ಗೆ ನಾನು ಹೇಳಲಾರೆ. ಅವರ ಬಗ್ಗೆ ಜಾರಕಿಹೊಳಿ ಸಹೋದರರು ಈಗಾಗಲೇ ಕೊಂಡಾಡಿದ್ದಾರೆ’ ಎಂದು ಮುಧೋಳ ಶಾಸಕ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನನಗೆ ₹30 ಕೋಟಿ ಅಮಿಷ ಒಡ್ಡಿದ್ದರು ಎಂಬ ಲಕ್ಷ್ಮೀ ಅವರ ಆರೋಪದ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ ಕಾರಜೋಳ ಪ್ರತಿಕ್ರಿಯಿಸಿದರು.
‘ಲಕ್ಷ್ಮಿಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಜಾರಕಿಹೊಳಿ ಸಹೋದರರನ್ನು ಕೇಳಿ. ಅವರ ಬಗ್ಗೆ ಮಾತನಾಡಲು ನನಗಿಂತ ಅವರೇ ಸೂಕ್ತ’ ಎಂದರು.