‘ವಿದೇಶ, ಹೊರರಾಜ್ಯ, ಹೊರ ಜಿಲ್ಲೆಗಳಿಂದ ಕಲಬುರ್ಗಿ ಪ್ರವೇಶಿಸಿದ 31,518 ಮಂದಿಯನ್ನು ಈವರೆಗೂ ಪತ್ತೆ ಮಾಡಲಾಗಿದೆ. ಎಲ್ಲರ ಮೇಲೂ ನಿಗಾ ವಹಿಸಲಾಗಿದೆ. ಇಷ್ಟಾದ ಮೇಲೂ ಯಾರಾದರೂ ಸುಳ್ಳು ಹೇಳಿ, ತಪ್ಪಿಸಿಕೊಂಡು ಕುಳಿತಿದ್ದರೆ ಅವರ ಮೇಲೆ ‘ದೇಶದ್ರೋಹ’ ಪ್ರಕರಣ ದಾಖಲಿಸಬೇಕು. ಜತೆಗೆ, ಲಾಕ್ಡೌನ್ ನಿಯಮ ಮುರಿಯುವವರು ಯಾರೇ ಆಗಿದ್ದರೂ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಬೇಕು. ಈ ನಿಮಯವನ್ನು ಏ. 14ರವರೆಗೂ ಕಾಯದೇ ಶನಿವಾರ (ಏ. 11)ದಿಂದಲೇ ಜಾರಿಗೆ ತರಬೇಕು’ ಎಂದೂ ಕಾರಜೋಳ ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.