<p><strong>ಬೆಂಗಳೂರು:</strong> ‘ಹಂಪಿಯು ಕೇವಲ ಸ್ಮಾರಕಗಳ ಅವಶೇಷಗಳಲ್ಲ, ವಿಜಯನಗರ ಸಾಮ್ರಾಜ್ಯದ ವೈಭವ ಮತ್ತು ಕಲಾತ್ಮಕತೆಯನ್ನು ಪ್ರತಿಬಿಂಬಿಸುವ ಜೀವಂತ ಭೂಮಿ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.</p>.<p>ರಾಜಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ, ಛಾಯಾಗ್ರಾಹಕ ಸೈಬಲ್ ದಾಸ್ ಅವರ ಹಂಪಿ ಚಿತ್ರಸಂಪುಟ ‘ಹಂಪಿ: ದಿ ರಿಚುಯಲ್ಸ್ ಆಫ್ ಟೈಮ್’ ಪುಸ್ತಕವನ್ನು ಜನಾರ್ಪಣೆ ಮಾಡಿ ಅವರು ಮಾತನಾಡಿದರು. ‘ಸೈಬಲ್ ದಾಸ್ ಅವರು ಹಂಪಿ ಅವಶೇಷಗಳಲ್ಲಿನ ಜೀವಂತಿಕೆಯನ್ನು ಸೆರೆ ಹಿಡಿದಿದ್ದಾರೆ. ಈ ಚಿತ್ರಗಳು ನೋಡುಗರನ್ನು ಹಿಂದಿನ ಕಾಲಘಟ್ಟಕ್ಕೆ ಕರೆದೊಯ್ಯುತ್ತವೆ’ ಎಂದರು.</p>.<p>ಕಾನೂನು ಸಚಿವ ಎಚ್.ಕೆ.ಪಾಟೀಲ, ‘ಸೈಬಲ್ ದಾಸ್ ಅವರ ಪುಸ್ತಕ ಹಂಪಿಯ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಐತಿಹಾಸಿಕ ಮಹತ್ವವನ್ನು ಸೆರೆ ಹಿಡಿದಿದೆ. ಒಂದು ಕಾಲದಲ್ಲಿ ಪ್ರವರ್ಧಮಾನದಲ್ಲಿದ್ದ ಪ್ರಾಚೀನ ನಾಗರಿಕತೆಗೆ ಈ ಕೃತಿ ಜೀವ ತುಂಬಿದೆ’ ಎಂದು ಹೇಳಿದರು. </p>.<p>ಪುಸ್ತಕವನ್ನು ಪ್ರಕಟಿಸಿರುವ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ, ‘ರಾಜಸ್ಥಾನದಿಂದ ಬಂದು ಇಲ್ಲಿ ನೆಲಸಿದವನನ್ನು ಈ ರಾಜ್ಯ ಬಿಗಿದಪ್ಪಿ ಬೆಳೆಸಿದೆ. ಅದಕ್ಕೆ ಕೃತಜ್ಞಾಪೂರ್ವಕವಾಗಿ ಈ ಪುಸ್ತಕವನ್ನು ಹೊರತರುವ ಪ್ರಯತ್ನ ಮಾಡಿದ್ದೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಹಂಪಿಯು ಕೇವಲ ಸ್ಮಾರಕಗಳ ಅವಶೇಷಗಳಲ್ಲ, ವಿಜಯನಗರ ಸಾಮ್ರಾಜ್ಯದ ವೈಭವ ಮತ್ತು ಕಲಾತ್ಮಕತೆಯನ್ನು ಪ್ರತಿಬಿಂಬಿಸುವ ಜೀವಂತ ಭೂಮಿ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.</p>.<p>ರಾಜಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ, ಛಾಯಾಗ್ರಾಹಕ ಸೈಬಲ್ ದಾಸ್ ಅವರ ಹಂಪಿ ಚಿತ್ರಸಂಪುಟ ‘ಹಂಪಿ: ದಿ ರಿಚುಯಲ್ಸ್ ಆಫ್ ಟೈಮ್’ ಪುಸ್ತಕವನ್ನು ಜನಾರ್ಪಣೆ ಮಾಡಿ ಅವರು ಮಾತನಾಡಿದರು. ‘ಸೈಬಲ್ ದಾಸ್ ಅವರು ಹಂಪಿ ಅವಶೇಷಗಳಲ್ಲಿನ ಜೀವಂತಿಕೆಯನ್ನು ಸೆರೆ ಹಿಡಿದಿದ್ದಾರೆ. ಈ ಚಿತ್ರಗಳು ನೋಡುಗರನ್ನು ಹಿಂದಿನ ಕಾಲಘಟ್ಟಕ್ಕೆ ಕರೆದೊಯ್ಯುತ್ತವೆ’ ಎಂದರು.</p>.<p>ಕಾನೂನು ಸಚಿವ ಎಚ್.ಕೆ.ಪಾಟೀಲ, ‘ಸೈಬಲ್ ದಾಸ್ ಅವರ ಪುಸ್ತಕ ಹಂಪಿಯ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಐತಿಹಾಸಿಕ ಮಹತ್ವವನ್ನು ಸೆರೆ ಹಿಡಿದಿದೆ. ಒಂದು ಕಾಲದಲ್ಲಿ ಪ್ರವರ್ಧಮಾನದಲ್ಲಿದ್ದ ಪ್ರಾಚೀನ ನಾಗರಿಕತೆಗೆ ಈ ಕೃತಿ ಜೀವ ತುಂಬಿದೆ’ ಎಂದು ಹೇಳಿದರು. </p>.<p>ಪುಸ್ತಕವನ್ನು ಪ್ರಕಟಿಸಿರುವ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ, ‘ರಾಜಸ್ಥಾನದಿಂದ ಬಂದು ಇಲ್ಲಿ ನೆಲಸಿದವನನ್ನು ಈ ರಾಜ್ಯ ಬಿಗಿದಪ್ಪಿ ಬೆಳೆಸಿದೆ. ಅದಕ್ಕೆ ಕೃತಜ್ಞಾಪೂರ್ವಕವಾಗಿ ಈ ಪುಸ್ತಕವನ್ನು ಹೊರತರುವ ಪ್ರಯತ್ನ ಮಾಡಿದ್ದೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>