ಪ್ರಕರಣವೇನು?: ಯಾದಗಿರಿ ಹೊರವಲಯದ ವನಕೇರಿ ಬಡಾವಣೆಯಲ್ಲಿ 2017ರ ಡಿಸೆಂಬರ್ 12ರಂದು ನಡೆದಿದ್ದ ಹಿಂದೂ ವಿರಾಟ್ ಸಮಾವೇಶದಲ್ಲಿ ರಾಜಾಸಿಂಗ್ ಠಾಕೂರ್ ಭಾಗವಹಿಸಿದ್ದರು. ಅವರಿಗೆ, "ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವಂತಿಲ್ಲ ಹಾಗೂ ಯಾವುದೇ ವಿವಾದಾತ್ಮಕ ಹೇಳಿಕೆ ನೀಡುವಂತಿಲ್ಲ ಎಂದು ಮೊದಲೇ ನಿರ್ದೇಶನ ನೀಡಲಾಗಿತ್ತು. ಆದರೂ, ಅವರು ವೇದಿಕೆಯಲ್ಲಿ ಕತ್ತಿಯನ್ನು ಝಳಪಿಸಿ ಜನರನ್ನು ಪ್ರಚೋದಿಸುವಂತಹ ಭಾಷಣ ಮಾಡಿದ್ದಾರೆ" ಎಂದು ಆರೋಪಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.