ಹೊನ್ನಾವರ (ಉತ್ತರ ಕನ್ನಡ): ‘ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಇಡಗುಂಜಿ ವಿನಾಯಕನ ಸನ್ನಿಧಿಗೆ ಬಂದು ಪೂಜೆ ಸಲ್ಲಿಸುವುದಾಗಿ ಹಿಂದೆ ಹರಕೆ ಹೊತ್ತಿದ್ದೆ.ಅದನ್ನು ತೀರಿಸಿದ್ದೇನೆ’ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದರು.
ದೇವಸ್ಥಾನದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಗೆಲುವಿಗಾಗಿ ದೇವರಲ್ಲಿ ಪ್ರಾರ್ಥಿಸಿದ್ದೇನೆ. ಅದು ಈಡೇರಿದರೆ ಮತ್ತೊಮ್ಮೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತೇನೆ’ಎಂದರು.
ದೇವಸ್ಥಾನದಲ್ಲಿ ನಡೆದ ಗಣಪತಿ ಹವನ, ಮಹಾಮಂಗಳಾರತಿಯಲ್ಲಿ ಪಾಲ್ಗೊಂಡರು. ಬಳಿಕ, ಮಂಗಳಮೂರ್ತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದಪಕ್ಷದ ಮುಖಂಡ ಗಣಪಯ್ಯ ಗೌಡ ಅವರ ಪುತ್ರನಮದುವೆ ಸಮಾರಂಭದಲ್ಲಿ ಪಾಲ್ಗೊಂಡರು. ಬೆಂಗಳೂರಿಗೆ ತೆರಳುವಮಾರ್ಗಮಧ್ಯೆ ಜೆಡಿಎಸ್ ಪಕ್ಷದಮತ್ತೊಬ್ಬಮುಖಂಡ ಶಂಭು ಗೌಡ ಅವರ ಗುಣವಂತೆಯ ಮನೆಗೆ ಭೇಟಿ ನೀಡಿ ಕಾರ್ಯಕರ್ತರ ಜೊತೆ ಮಾತನಾಡಿದರು.