‘ಶಾಲೆಯ ಮುಖ್ಯ ಶಿಕ್ಷಕ ನಂದೀಶ್ ಹಾಗೂ ಅಡುಗೆ ಸಿಬ್ಬಂದಿ ಪ್ರಮೀಳಾ, ರಾಜಮ್ಮ, ರೇವಣ್ಣಮ್ಮ, ಶಾರದ, ಪುಟ್ಟಸಿದ್ದಮ್ಮ ಅವರು ಪ್ರತಿನಿತ್ಯ ಅಡುಗೆ ಎಣ್ಣೆ, ಅಕ್ಕಿ, ಬೆಳೆ ಮತ್ತಿತರ ದಿನಸಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ. ನಾವು ಶಿಕ್ಷಣ ಇಲಾಖೆಗೆ ಹಲವು ಬಾರಿ ಮಾಹಿತಿ ನೀಡಿದರೂ ಯಾರು ತಲೆ ಕೆಡೆಸಿಕೊಳ್ಳುತ್ತಿರಲಿಲ್ಲ. ಈಗ ವಿಡಿಯೊ ವೈರಲ್ ಆಗಿದೆ. ಇನ್ನಾದರೂ ಇಲಾಖೆ ಎಚ್ಚರಗೊಳ್ಳಲಿ’ ಎಂದು ಗ್ರಾಮದ ಯುವಕರು ಆಗ್ರಹಿಸಿದ್ದಾರೆ.