ವಿಚಾರಣೆ ವೇಳೆ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎ.ಬೆಳ್ಳಿಯಪ್ಪ ಅವರು, ‘ಪೊಲೀಸರು ಕೃಷ್ಣಕುಮಾರ್ ಅವರ ಬಗ್ಗೆ ಇರುವಿಕೆಯ ಬಗ್ಗೆ ಬಿಡದಿಯ ನಿತ್ಯಾನಂದ ಪೀಠಕ್ಕೆ ತೆರಳಿ ಖುದ್ದು ಪರಿಶೀಲನೆ ನಡೆಸಿದ್ದಾರೆ. ಆದರೆ, ಕೃಷ್ಣಕುಮಾರ್ ಬಿಡದಿಯ ಧ್ಯಾನಪೀಠದಲ್ಲಿ ಇಲ್ಲ. ಅವರ ಇ–ಮೇಲ್ಗೆ ನಡೆಸಲಾದ ಸಂವಹನದಲ್ಲಿ; ಈ ಮೊದಲು ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂಬ ಉತ್ತರ ಬಂದಿತ್ತು. ನಂತರ ಬಂದಿಲ್ಲ. ಆಶ್ರಮದಲ್ಲಿ ಇರುವವರಿಗೂ ಅವರು ಎಲ್ಲಿದ್ದಾರೆ ಎನ್ನುವ ಮಾಹಿತಿ ಇಲ್ಲ’ ಎಂದು ತಿಳಿಸಿದರು.