ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಕುರಿತು ಪ್ರತಿಕ್ರಿಯಿಸಿ ಮಕ್ಕಳು ದೇಶದ ಚರಿತ್ರೆ ಕಲಿಯಬೇಕು. ಇತಿಹಾಸದಲ್ಲಿ ನಡೆದುಹೋಗಿರುವ ತಪ್ಪುಗಳನ್ನು ತಿಳಿಯಬೇಕು. ಬ್ರಿಟಿಷರು, ಮೊಘಲರು ಭಾರತಕ್ಕೆ ಬಂದಿದ್ದು ಏಕೆ, ಘಜ್ನಿ ಮಹಮ್ಮದ್ 18 ಬಾರಿ ದಾಳಿ ಮಾಡಿದ್ದು ಏಕೆ ಎಂಬ ಸತ್ಯ ಮಕ್ಕಳಿಗೆ ತಿಳಿಯಬೇಕು. ದುರದೃಷ್ಟವಶಾತ್ ಪದವಿ ವಿದ್ಯಾರ್ಥಿಗಳಿಗೆ ದೇಶದ ಚರಿತ್ರೆಯ ಅರಿವು ಇಲ್ಲದಿರುವುದು ವಿಪರ್ಯಾಸ ಎಂದರು.