‘ಸ್ವಾತಂತ್ರ್ಯ ನಂತರ ಕಾಂಗ್ರೆಸ್ ವಿಸರ್ಜಿಸಬೇಕು ಎಂದು ಗಾಂಧಿ ಹೇಳಿದ್ದು ನಿಜ. ಆದರೆ, ಕಾಂಗ್ರೆಸ್ ವಿಸರ್ಜಿಸಿ, ಲೋಕ ಸೇವಾ ದಳ ಎಂಬ ಸಂಘ ರಚಿಸಿಕೊಂಡು ಆಳುವವರನ್ನು ತಿದ್ದುವ ಕೆಲಸವನ್ನು ಮಾಡಬೇಕು ಎಂಬ ಉದ್ದೇಶ ಗಾಂಧಿಯವರಿಗಿತ್ತು. ಆದರೆ, ಮೋದಿಯವರು ಈ ವಾಕ್ಯವನ್ನು ಪೂರ್ಣವಾಗಿ ಹೇಳದೆ, ಕಾಂಗ್ರೆಸ್ ವಿಸರ್ಜಿಸಲು ಗಾಂಧಿ ಹೇಳಿದ್ದರು ಎಂಬುದಷ್ಟನ್ನೇ ವೈಭವೀಕರಿಸುತ್ತಿದ್ದಾರೆ’ ಎಂದು ದೊರೆಸ್ವಾಮಿ ಹೇಳಿದರು.