<p><strong>ಬೆಂಗಳೂರು: </strong>ಪತ್ರಕರ್ತ ರಾಮಕೃಷ್ಣ ಉಪಾಧ್ಯ ಬರೆದಿರುವ ಡಿ.ಕೆ. ರವಿ ದುರಂತ ಕತೆ, "ನಗ್ನಸತ್ಯ" ಹಾಗೂ "ಲ್ಯಾಂಡ್, ಲಸ್ಟ್ ಆ್ಯಂಡ್ ಆಡಿಯೊಟೇಪ್ಸ್" ಪುಸ್ತಕಗಳ ಬಿಡುಗಡೆಯಾಗಿದೆ.</p>.<p><br />"ನಗ್ನಸತ್ಯ"ದಲ್ಲಿರುವ ರೋಚಕ ಅಂಶಗಳು</p>.<p>* ಡಿ.ಕೆ. ರವಿ ಅವರ ಹಠಾತ್ ಜನಪ್ರಿಯತೆ ಮತ್ತು ದುರಂತ ಪತನದ ಹಿಂದೆ ಖಿನ್ನತೆ ಅಡಗಿತ್ತು.</p>.<p>* ಕೊಲಾರ ಡಿಸಿಯಾಗಿ ಮರಳು ಮತ್ತು ಭೂ ಮಾಫಿಯಾ ವಿರುದ್ಧ ಅವರು ಕೈಗೊಂಡ ದಿಟ್ಟ ಕಾರ್ಯಾಚರಣೆಗಳು ಅವರಿಗೆ ಖ್ಯಾತಿ ನೀಡಿದ್ದವು.</p>.<p>* ಮಾಧ್ಯಮದ ನಿಕಟ ಸಂಪರ್ಕವನ್ನು ಅವರು ಬಳಸಿಕೊಂಡಿದ್ದರು.</p>.<p>* ಸ್ನೇಹಿತರ ಜತೆಗೂಡಿ ರಿಯಲ್ ಎಸ್ಟೇಟ್ ಉದ್ಯಮ ಮತ್ತು ವ್ಯವಹಾರಕ್ಕಿಳಿದು, ₹ 500 ಕೋಟಿ ಗಳಿಸುವ ಉದ್ದೇಶ ಹೊಂದಿದ್ದರು.</p>.<p>* ಆದರೆ, ರಿಯಲ್ ಎಸ್ಟೇಟ್ ವ್ಯಾಪಾರ ತಿಮಿಂಗಿಲಗಳಿಂದ ತುಂಬಿದೆ. ಅಲ್ಲಿ ವೇಗವಾಗಿ ಹಣ ಗಳಿಸುವುದು ಯೋಚಿಸಿದಷ್ಟು ಸುಲಭವಲ್ಲ ಎಂದು ಮನವರಿಕೆಯಾದಾಗ ಅವರು ನಿರಾಶೆಗೊಂಡರು.</p>.<p>* ಭೂಮಿಯನ್ನು ಬೆನ್ನಟ್ಟುತ್ತಿರುವಾಗ ನೆರೆಯ ಜಿಲ್ಲೆಯ ಮಹಿಳಾ ಐಎಎಸ್ ಅಧಿಕಾರಿಯೊಂದಿಗೆ ಭಾವನಾತ್ಮಕ ನಂಟಿನಲ್ಲಿ ಸಿಕ್ಕಿಕೊಂಡರು. ಇದು ನೋಡುಗರಿಗೆ ಏಕಮುಖ ಪ್ರೇಮ ಪ್ರಕರಣವೆಂದು ತೋರುತ್ತಿತ್ತು.</p>.<p>* ರವಿಯ ಗೀಳು, ಪ್ರೀತಿ ಮತ್ತು ವಾತ್ಸಲ್ಯಗಳು ಇಬ್ಬರ ದಾಂಪತ್ಯ ಮತ್ತು ವೃತ್ತಿಯನ್ನು ಹಾಳು ಗೆಡವುತ್ತದೆ ಎಂಬುದನ್ನು ಅರಿತುಕೊಂಡ ಮಹಿಳಾ ಅಧಿಕಾರಿ ರವಿ ಅವರನ್ನು ಕೈಬಿಟ್ಟರು.</p>.<p>* ಇದು ಅವರ ಬದುಕು ಬೇಗನೇ ದುರಂತದಲ್ಲಿ ಅಂತ್ಯಗೊಳ್ಳಲು ಬಹುಮಟ್ಟಿಗೆ ಕಾರಣವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಪತ್ರಕರ್ತ ರಾಮಕೃಷ್ಣ ಉಪಾಧ್ಯ ಬರೆದಿರುವ ಡಿ.ಕೆ. ರವಿ ದುರಂತ ಕತೆ, "ನಗ್ನಸತ್ಯ" ಹಾಗೂ "ಲ್ಯಾಂಡ್, ಲಸ್ಟ್ ಆ್ಯಂಡ್ ಆಡಿಯೊಟೇಪ್ಸ್" ಪುಸ್ತಕಗಳ ಬಿಡುಗಡೆಯಾಗಿದೆ.</p>.<p><br />"ನಗ್ನಸತ್ಯ"ದಲ್ಲಿರುವ ರೋಚಕ ಅಂಶಗಳು</p>.<p>* ಡಿ.ಕೆ. ರವಿ ಅವರ ಹಠಾತ್ ಜನಪ್ರಿಯತೆ ಮತ್ತು ದುರಂತ ಪತನದ ಹಿಂದೆ ಖಿನ್ನತೆ ಅಡಗಿತ್ತು.</p>.<p>* ಕೊಲಾರ ಡಿಸಿಯಾಗಿ ಮರಳು ಮತ್ತು ಭೂ ಮಾಫಿಯಾ ವಿರುದ್ಧ ಅವರು ಕೈಗೊಂಡ ದಿಟ್ಟ ಕಾರ್ಯಾಚರಣೆಗಳು ಅವರಿಗೆ ಖ್ಯಾತಿ ನೀಡಿದ್ದವು.</p>.<p>* ಮಾಧ್ಯಮದ ನಿಕಟ ಸಂಪರ್ಕವನ್ನು ಅವರು ಬಳಸಿಕೊಂಡಿದ್ದರು.</p>.<p>* ಸ್ನೇಹಿತರ ಜತೆಗೂಡಿ ರಿಯಲ್ ಎಸ್ಟೇಟ್ ಉದ್ಯಮ ಮತ್ತು ವ್ಯವಹಾರಕ್ಕಿಳಿದು, ₹ 500 ಕೋಟಿ ಗಳಿಸುವ ಉದ್ದೇಶ ಹೊಂದಿದ್ದರು.</p>.<p>* ಆದರೆ, ರಿಯಲ್ ಎಸ್ಟೇಟ್ ವ್ಯಾಪಾರ ತಿಮಿಂಗಿಲಗಳಿಂದ ತುಂಬಿದೆ. ಅಲ್ಲಿ ವೇಗವಾಗಿ ಹಣ ಗಳಿಸುವುದು ಯೋಚಿಸಿದಷ್ಟು ಸುಲಭವಲ್ಲ ಎಂದು ಮನವರಿಕೆಯಾದಾಗ ಅವರು ನಿರಾಶೆಗೊಂಡರು.</p>.<p>* ಭೂಮಿಯನ್ನು ಬೆನ್ನಟ್ಟುತ್ತಿರುವಾಗ ನೆರೆಯ ಜಿಲ್ಲೆಯ ಮಹಿಳಾ ಐಎಎಸ್ ಅಧಿಕಾರಿಯೊಂದಿಗೆ ಭಾವನಾತ್ಮಕ ನಂಟಿನಲ್ಲಿ ಸಿಕ್ಕಿಕೊಂಡರು. ಇದು ನೋಡುಗರಿಗೆ ಏಕಮುಖ ಪ್ರೇಮ ಪ್ರಕರಣವೆಂದು ತೋರುತ್ತಿತ್ತು.</p>.<p>* ರವಿಯ ಗೀಳು, ಪ್ರೀತಿ ಮತ್ತು ವಾತ್ಸಲ್ಯಗಳು ಇಬ್ಬರ ದಾಂಪತ್ಯ ಮತ್ತು ವೃತ್ತಿಯನ್ನು ಹಾಳು ಗೆಡವುತ್ತದೆ ಎಂಬುದನ್ನು ಅರಿತುಕೊಂಡ ಮಹಿಳಾ ಅಧಿಕಾರಿ ರವಿ ಅವರನ್ನು ಕೈಬಿಟ್ಟರು.</p>.<p>* ಇದು ಅವರ ಬದುಕು ಬೇಗನೇ ದುರಂತದಲ್ಲಿ ಅಂತ್ಯಗೊಳ್ಳಲು ಬಹುಮಟ್ಟಿಗೆ ಕಾರಣವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>