ಮರಳು, ಕೆಂಪುಕಲ್ಲು, ಕೆಂಪುಮಣ್ಣು, ಕಟ್ಟಡಕಲ್ಲು ಹಾಗೂ ಜೆಲ್ಲಿಕಲ್ಲಿಗೆ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಏಕರೂಪದ ದರ ನಿಗದಿ ಮಾಡಬೇಕು. ಅವುಗಳ ಗಣಿಗಾರಿಕೆಗೆ ಇರುವ ತೊಡಕುಗಳನ್ನು ನಿವಾರಿಸಲು 2023ರ ನಿಯಮಗಳನ್ನು ರದ್ದು ಮಾಡಿ, 2016ರ ತಿದ್ದುಪಡಿ ನಿಯಮಗಳನ್ನೇ ಜಾರಿಗೊಳಿಸುವ ಅಗತ್ಯದ ಕುರಿತು ಮುಖ್ಯಮಂತ್ರಿಗೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.