<p><strong>ನವದೆಹಲಿ</strong>: ನಷ್ಟದ ಸುಳಿಗೆ ಸಿಲುಕಿ ಬ್ಯಾಂಕ್ ಸಾಲದಿಂದ ನಲುಗಿರುವ ಬೆಂಗಳೂರಿನ ಐಟಿಐ ಲಿಮಿಟೆಡ್ನ ₹3,473 ಕೋಟಿ ಮೊತ್ತದ ಆಸ್ತಿಯ ನಗದೀಕರಣಕ್ಕೆ ಕೇಂದ್ರ ದೂರಸಂಪರ್ಕ ಇಲಾಖೆ ಮುಂದಾಗಿದೆ. </p>.<p>ಲೋಕಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕೇಳಿದ ಪ್ರಶ್ನೆಗೆ ದೂರಸಂಪರ್ಕ ಖಾತೆಯ ರಾಜ್ಯ ಸಚಿವ ಚಂದ್ರಶೇಖರ ಪೆಮ್ಮಸಾನಿ ಉತ್ತರ ನೀಡಿ, ‘ನಗದೀಕರಣಕ್ಕಾಗಿ 91 ಎಕರೆಯ ನಾಲ್ಕು ಆಸ್ತಿಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. </p>.<p>2024-25ನೇ ಹಣಕಾಸು ವರ್ಷದಲ್ಲಿ, ಕಂಪನಿಯು ₹4,323 ಕೋಟಿ ವಹಿವಾಟು ನಡೆಸಿದೆ. ಬ್ಯಾಂಕ್ಗಳ ಸಾಲ ₹1,325 ಕೋಟಿ ಬಾಕಿ ಇದೆ. ನೌಕರರ ವೇತನ ಹಾಗೂ ನಿವೃತ್ತಿ ವೇತನ ₹339 ಕೋಟಿ ಪಾವತಿಸಿಲ್ಲ. ಸಂಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರವು ಈ ಹಿಂದೆ ₹4,156 ಕೋಟಿ ಹಣಕಾಸಿನ ನೆರವು ನೀಡಿತ್ತು. ನೌಕರರ ಬಾಕಿ ವೇತನ ಪಾವತಿ ಹಾಗೂ ಬ್ಯಾಂಕ್ ಸಾಲಗಳನ್ನು ತೀರಿಸಲು ಕೆಲವು ಖಾಲಿ ಜಾಗಗಳನ್ನು ನಗದೀಕರಣಕ್ಕೆ ಬಳಸಿಕೊಳ್ಳಲು ಯೋಜಿಸಲಾಗಿದೆ. ಇದಕ್ಕಾಗಿ ಐಟಿಐ ಜತೆಗೆ ಮಾತುಕತೆ ನಡೆದಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. </p>.<p><strong>ಯಾವೆಲ್ಲ ಆಸ್ತಿಗಳ ನಗದೀಕರಣ </strong></p>.<p>ಜಾಗ; ಎಕರೆ; ಮೌಲ್ಯ (₹ಕೋಟಿಗಳಲ್ಲಿ)</p>.<p>ಬಿ.ನಾರಾಯಣಪುರ; 10.20; 357</p>.<p>ಕೆ.ಆರ್.ಪುರ; 44; 1651</p>.<p>ಕೆ.ಆರ್.ಪುರ ಐಟಿಐ ಟೌನ್ಶಿಪ್; 21; 823</p>.<p>ಕೆ.ಆರ್.ಪುರ ಐಟಿಐ ಟೌನ್ಶಿಪ್; 16; 642</p>.<p>ಒಟ್ಟು; 91; 3,473</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ನಷ್ಟದ ಸುಳಿಗೆ ಸಿಲುಕಿ ಬ್ಯಾಂಕ್ ಸಾಲದಿಂದ ನಲುಗಿರುವ ಬೆಂಗಳೂರಿನ ಐಟಿಐ ಲಿಮಿಟೆಡ್ನ ₹3,473 ಕೋಟಿ ಮೊತ್ತದ ಆಸ್ತಿಯ ನಗದೀಕರಣಕ್ಕೆ ಕೇಂದ್ರ ದೂರಸಂಪರ್ಕ ಇಲಾಖೆ ಮುಂದಾಗಿದೆ. </p>.<p>ಲೋಕಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕೇಳಿದ ಪ್ರಶ್ನೆಗೆ ದೂರಸಂಪರ್ಕ ಖಾತೆಯ ರಾಜ್ಯ ಸಚಿವ ಚಂದ್ರಶೇಖರ ಪೆಮ್ಮಸಾನಿ ಉತ್ತರ ನೀಡಿ, ‘ನಗದೀಕರಣಕ್ಕಾಗಿ 91 ಎಕರೆಯ ನಾಲ್ಕು ಆಸ್ತಿಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. </p>.<p>2024-25ನೇ ಹಣಕಾಸು ವರ್ಷದಲ್ಲಿ, ಕಂಪನಿಯು ₹4,323 ಕೋಟಿ ವಹಿವಾಟು ನಡೆಸಿದೆ. ಬ್ಯಾಂಕ್ಗಳ ಸಾಲ ₹1,325 ಕೋಟಿ ಬಾಕಿ ಇದೆ. ನೌಕರರ ವೇತನ ಹಾಗೂ ನಿವೃತ್ತಿ ವೇತನ ₹339 ಕೋಟಿ ಪಾವತಿಸಿಲ್ಲ. ಸಂಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರವು ಈ ಹಿಂದೆ ₹4,156 ಕೋಟಿ ಹಣಕಾಸಿನ ನೆರವು ನೀಡಿತ್ತು. ನೌಕರರ ಬಾಕಿ ವೇತನ ಪಾವತಿ ಹಾಗೂ ಬ್ಯಾಂಕ್ ಸಾಲಗಳನ್ನು ತೀರಿಸಲು ಕೆಲವು ಖಾಲಿ ಜಾಗಗಳನ್ನು ನಗದೀಕರಣಕ್ಕೆ ಬಳಸಿಕೊಳ್ಳಲು ಯೋಜಿಸಲಾಗಿದೆ. ಇದಕ್ಕಾಗಿ ಐಟಿಐ ಜತೆಗೆ ಮಾತುಕತೆ ನಡೆದಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. </p>.<p><strong>ಯಾವೆಲ್ಲ ಆಸ್ತಿಗಳ ನಗದೀಕರಣ </strong></p>.<p>ಜಾಗ; ಎಕರೆ; ಮೌಲ್ಯ (₹ಕೋಟಿಗಳಲ್ಲಿ)</p>.<p>ಬಿ.ನಾರಾಯಣಪುರ; 10.20; 357</p>.<p>ಕೆ.ಆರ್.ಪುರ; 44; 1651</p>.<p>ಕೆ.ಆರ್.ಪುರ ಐಟಿಐ ಟೌನ್ಶಿಪ್; 21; 823</p>.<p>ಕೆ.ಆರ್.ಪುರ ಐಟಿಐ ಟೌನ್ಶಿಪ್; 16; 642</p>.<p>ಒಟ್ಟು; 91; 3,473</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>