ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸ್ಪೋಟದ ಹಿಂದೆ ಯಾರಿದ್ದಾರೆ? ಯಾವ ಕಾರಣಕ್ಕೆ ಆಗಿದೆ ಎನ್ನುವುದು ಪೊಲೀಸ್ ತನಿಖೆಯ ಬಳಿಕ ಹೊರ ಬರಲಿದೆ. ತನಿಖೆಗೆ ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ.ಸತ್ಯಾಂಶವನ್ನು ಶೀಘ್ರ ಜನರ ಮುಂದೆ ಇಡಲಿದ್ದೇವೆ. ಈ ದುರಂತದಲ್ಲಿ ಒಬ್ಬರಿಗೆ ಗಾಯವಾಗಿದ್ದು, ಅಲ್ಲಿಗೆ ಭೇಟಿ ನೀಡಿಯೇ ಇಲ್ಲಿಗೆ ಬರಲು ವಿಳಂಬವಾಯಿತು’ ಎಂದು ಹೇಳಿದರು.