ಗಾಯಕ ವಿಜಯ್ ಪ್ರಕಾಶ್ ‘ಗುರುಕಿರಣ್, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ಅರ್ಚನಾ ಉಡುಪ, ಅನುರಾಧ ಭಟ್, ರಘು ದೀಕ್ಷಿತ್ ಹೀಗೆ100ಕ್ಕೂ ಹೆಚ್ಚು ಗಾಯಕರು ಸಂಭಾವನೆ ಪಡೆಯದೆ ಹಾಡಿದ್ದಾರೆ. ಸಕ್ರಿಯವಾಗಿ ಕಲಾ ಸೇವೆ ಮಾಡಿರುವ, ಕಲೆಗಾಗಿಯೇ ಬದುಕುತ್ತಿರುವವರಿಗೆ ಈ ಹಣ ಸೇರುತ್ತದೆ. ಈಗಾಗಲೇ 400ಕ್ಕೂ ಹೆಚ್ಚು ಕಲಾವಿದರ ಪಟ್ಟಿ ಸಿದ್ಧಪಡಿಸಲಾಗಿದೆ. ನಾವು ಕೊಡುತ್ತಿರುವ ಹಣ ಅರ್ಹರಿಗೆ ತಲುಪುತ್ತಿದೆಯೇ ಎಂಬುದನ್ನು ತೇಜಸ್ವಿ ಸೂರ್ಯ ಅವರ ತಂಡ ಪರಿಶೀಲಿಸುತ್ತದೆ. ಕಾರ್ಯಕ್ರಮಕ್ಕಾಗಿ ಸತತ ನಾಲ್ಕು ದಿನ ಚಿತ್ರೀಕರಣ ನಡೆಸಲಾಗಿದೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನೆನಪಿಗಾಗಿ ಸೋನು ನಿಗಂ ಅವರು ಹಿಂದಿ ಹಾಡೊಂದನ್ನು ಹಾಡಿದ್ದಾರೆ. ಅದನ್ನು ಬಿಟ್ಟು ಉಳಿದೆಲ್ಲವೂ ಕನ್ನಡ ಹಾಡುಗಳೇ’ ಎಂದು ಮಾಹಿತಿ ನೀಡಿದರು.