ಶಿಕ್ಷಣ ಇಲಾಖೆ ರೂಪಿಸಿದ ಹೊಸ ನಿಯಮಗಳನ್ನು ಹಳೆಯ ಶಿಕ್ಷಣ ಸಂಸ್ಥೆಗಳ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ. ಅಗ್ನಿ, ಕಟ್ಟಡ ಸುರಕ್ಷತೆ ಪ್ರಮಾಣಪತ್ರದ ನೆಪದಲ್ಲಿ ತೊಂದರೆ ಕೊಡಲಾಗುತ್ತಿದೆ. 2018ಕ್ಕಿಂತ ಮೊದಲಿನ ಸಂಸ್ಥೆಗಳಿಗೆ ನಿರಾಕ್ಷೇಪಣೆ ಪತ್ರ ಕಡ್ಡಾಯಗೊಳಿಸಬಾರದು. ಶಿಕ್ಷಣ ಇಲಾಖೆಯ ಆದೇಶವನ್ನು ರದ್ದುಗೊಳಿಸಿದ ನ್ಯಾಯಾಲಯದ ತೀರ್ಪು ಪರಿಗಣಿಸಬೇಕು. ಶಾಲಾ ಕಟ್ಟಡ ಪರವಾನಗಿ ಸರಳಗೊಳಿಸಬೇಕು. ಹೆಚ್ಚುವರಿ ತರಗತಿ ಆರಂಭಿಸಿದ್ದಕ್ಕೆ ಅನಧಿಕೃತ ಎಂದು ಘೋಷಿಸಿರುವ 620 ಶಾಲೆಗಳನ್ನು ಸಕ್ರಮಗೊಳಿಸಬೇಕು ಎಂದು ಕೋರಿದರು.