‘ಕಿರುತೆರೆ: ಸಾಮಾಜಿಕ ಜವಾಬ್ದಾರಿಗಳು’ ಕುರಿತು ಮಾತನಾಡಿದ ಚಿತ್ರ ನಿರ್ದೇಶಕ ಬಿ.ಸುರೇಶ್, ‘ಥಿಯೇಟರ್ಗಳಿಗೆ ಹೊರಟಿದ್ದ ಜನರನ್ನು ದಿನಪೂರ್ತಿ ಮನೆಯಲ್ಲೇ ಕೂರಿಸುವುದಕ್ಕಾಗಿ ಕಿರುತೆರೆ ಬಂತು. ಮಾರುಕಟ್ಟೆಯನ್ನು ಗಮನಿಸಿದಾಗ ಕಿರುತೆರೆಯು ಹಿರಿತೆರೆಯಾಗಿ ಬದಲಾಗಿದೆ. ಪ್ರತಿವರ್ಷ ಸಿನಿಮಾದಲ್ಲಿ ₹400 ಕೋಟಿ ವಹಿವಾಟು ನಡೆದರೆ ಕಿರುತೆರೆಯಲ್ಲಿ ₹1800 ಕೋಟಿ ವಹಿವಾಟು ನಡೆಯುತ್ತದೆ. ಕನ್ನಡದಲ್ಲಿ ಉಪಗ್ರಹ ಆಧಾರಿತ ಅಂದಾಜು24 ವಾಹಿನಿಗಳಿದ್ದು, ಮಾಹಿತಿ, ಶಿಕ್ಷಣ, ಮನರಂಜನೆ ಎಂಬ ಮೂರು
ಪ್ರಮುಖ ಅಂಶಗಳನ್ನು ಒಳಗೊಂಡಿದ್ದವು. ಕಾಲ ಬದಲಾದಂತೆ ಮಾಹಿತಿ, ಶಿಕ್ಷಣ ಹಿನ್ನೆಲೆಗೆ ಸರಿದು ಮನರಂಜನೆ ಮಾತ್ರ ಉಳಿದುಕೊಂಡಿದೆ’ ಎಂದು ಕಳವಳ ವ್ಯಕ್ತಪಡಿಸಿದರು.