<p><strong>ಬೆಂಗಳೂರು:</strong> ‘ನ್ಯಾಯ ನಿರ್ಣಯದ ಆ ದಿನ ಬಂದೇ ಬರುತ್ತದೆ. ಅಂದು ನಮ್ಮ ನಡವಳಿಕೆ, ಕಾಯಕಗಳಿಗೆ ನಾವೇ ಉತ್ತರಿಸಬೇಕು. ಆ ಮಹತ್ವದ ದಿನ ನಮ್ಮ ಪರವಾಗಿ ವಾದಿಸಲು ವಕೀಲರೂ ಇರುವುದಿಲ್ಲ. ಬಂಧುಗಳು, ಅಭಿಮಾನಿಗಳು ಇರುವುದಿಲ್ಲ’.</p>.<p>ಬೈಬಲ್ನ ‘ಜಡ್ಜ್ಮೆಂಟ್ ಡೇ’ ಕುರಿತ ಪುಸ್ತಕವೊಂದರ ಸಾಲುಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಆ ಪಕ್ಷದ ನಾಯಕರನ್ನು ಚುಚ್ಚಿದ ಬಗೆ ಇದು.</p>.<p>ವಿಧಾನಸಭೆಯಲ್ಲಿ ಶುಕ್ರವಾರ ವಿಶ್ವಾಸಮತ ನಿರ್ಣಯದ ಮೇಲೆ ಚರ್ಚೆ ಆರಂಭಿಸಿದ ಅವರು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ಸುಮಾರು ಒಂದೂವರೆ ಗಂಟೆ ವಾಗ್ದಾಳಿ ನಡೆಸಿದರೂ ಬಿಜೆಪಿ ಸದಸ್ಯರು ಚಕಾರ ಎತ್ತಲಿಲ್ಲ.</p>.<p>‘ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುವಾಗ ನನಗೆ ಅನಿಸಿದ್ದು ಒಂದೇ. ನಾವು ಏನೇ ಮಾಡಿದರೂ, ಹೇಗೆ ನಡೆದುಕೊಂಡರೂ ಅಂತಿಮವಾಗಿ ಒಬ್ಬನಿಗೆ ಉತ್ತರ ಹೇಳಬೇಕು’ ಎಂದು ಕುಮಾರಸ್ವಾಮಿ ಹೇಳಿದರು.</p>.<p>‘ಧರಂ ಸಿಂಗ್ ಅವರ ಬೆನ್ನಿಗೆ ಚೂರಿ ಹಾಕಿದ್ದೆ. ಅವರ ಸಾವಿಗೆ ನಾನೇ ಕಾರಣ ಎಂದು ಯಡಿಯೂರಪ್ಪ ಅವರು ಈ ಹಿಂದೆ ಆರೋಪ ಮಾಡಿದ್ದರು. ಸಿಂಗ್ ಅವರು ತಂದೆ ಸಮಾನರು. ಅವರ ಸಾವಿಗೆ ನಾನು ಕಾರಣ ಅಲ್ಲ’ ಎಂದೂ ಅವರು ತಿರುಗೇಟು ನೀಡಿದರು.</p>.<p>‘ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದ ಮೊದಲ ದಿನದಿಂದಲೇ ಅತಂತ್ರಗೊಳಿಸುವ ಕೆಲಸ ವ್ಯವಸ್ಥಿತವಾಗಿ ನಡೆಯಿತು. ಸರ್ಕಾರ ಇವತ್ತು ಪತನಗೊಳ್ಳಲಿದೆ, ನಾಳೆ ಪತನಗೊಳ್ಳಲಿದೆ ಎಂದು ಸುದ್ದಿ ಹಬ್ಬಿಸಲಾಯಿತು. ಈ ಸರ್ಕಾರ ಈಗ ಅಂತಿಮ ಹಂತಕ್ಕೆ ತಲುಪಿದೆ. ನಾನು ಅಧಿಕಾರಕ್ಕೆ ಅಂಟಿ ಕುಳಿತವನು ಅಲ್ಲ. ಬಿಜೆಪಿಯವರು ಅಧಿಕಾರದ ಚುಕ್ಕಾಣಿ ಹಿಡಿಯುವ ಆತುರದಲ್ಲಿದ್ದಾರೆ. ನಮಗೆ ಬಿಟ್ಟ ಬಾಣ ಮುಂದಿನ ದಿನಗಳಲ್ಲಿ ಅವರಿಗೇ ತಿರುಗಿ ನಾಟಲಿದೆ’ ಎಂದು ಅವರು ಹೇಳಿದರು.</p>.<p>‘2008ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಯಿತು. ಬಿಜೆಪಿಯವರು ಯಾಮಾರಿಸಿದ್ದಾರೆ ಎಂದು ಆರೋಪಿಸಿ ಆರು ಪಕ್ಷೇತರ ಶಾಸಕರು ನನ್ನ ಬಳಿಗೆ ಬಂದರು. ನಾನು ಇಂತಹ ಚಟುವಟಿಕೆಗೆ ಬರುವುದಿಲ್ಲ ಎಂದೆ. ಬಳಿಕ ಬಿಜೆಪಿಯ ಸಚಿವರು ಹಾಗೂ ಶಾಸಕರು ರೆಸಾರ್ಟ್ಗೆ ಹೋದರು. ಆ ಶಾಸಕರು ನನ್ನನ್ನು ಬಳಸಿಕೊಂಡರು. ಆಗ ಸರ್ಕಾರವನ್ನು ಅತಂತ್ರಗೊಳಿಸಲು ಯತ್ನಿಸಿದ ಎಂ.ಪಿ.ರೇಣುಕಾಚಾರ್ಯ ಅವರು ಈಗ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ನಾಯಕತ್ವ ವಹಿಸಿಕೊಂಡಿದ್ದಾರೆ. ಬಾಗಿಲು ಕಾಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಛೇಡಿಸಿದರು.</p>.<p>‘ಅತೃಪ್ತ ಶಾಸಕರನ್ನು ಒಲಿಸಿಕೊಳ್ಳಲು ಯಡಿಯೂರಪ್ಪ ಅವರು, ತಪ್ಪಾಗಿದೆ, ತಿದ್ದಿಕೊಳ್ಳುವೆ ಎಂದರು. ನಾನು ಆ ರೀತಿ ಅಂಗಲಾಚುವುದಿಲ್ಲ. ಅಧಿಕಾರ ಶಾಶ್ವತ ಅಲ್ಲ. ನನಗೆ ಯಾವ ಆತಂಕವೂ ಇಲ್ಲ. ನಾನು ಸಾಂದರ್ಭಿಕ ಶಿಶು ಅಷ್ಟೇ. ದೇವರ ಆಶೀರ್ವಾದ ಇರುವವರೆಗೆ ಈ ಸರ್ಕಾರ ಇರುತ್ತದೆ’ ಎಂದು ತಿಳಿಸಿದರು.</p>.<p><strong>‘ಆಟೊದಂತೆ ವಿಶೇಷ ವಿಮಾನ ಓಡುತ್ತದೆ’</strong><br />*ನಮ್ಮ ಶಾಸಕರನ್ನು ಕೂಡಿ ಹಾಕಲು ಬಿಜೆಪಿಯವರು ಮುಂಬೈಯಲ್ಲಿ ಶಾಶ್ವತವಾಗಿ ಹೋಟೆಲ್ ಒಂದನ್ನು ಇಟ್ಟುಕೊಂಡಿದ್ದಾರೆ.</p>.<p>ಶಾಸಕರ ನೋಡಿಕೊಳ್ಳಲು ಯಾರೋ ಲಾಡ್ ಎಂಬುವರನ್ನು ಇಟ್ಟಿದ್ದಾರೆ. ಶಾಸಕರ ಕಾಯಲು ಬೌನ್ಸರ್ಗಳನ್ನು ಇಟ್ಟಿದ್ದಾರೆ. ಈ ಚಟುವಟಿಕೆಗಳನ್ನು ಎಷ್ಟು ದಿನ ನಡೆಸುತ್ತೀರಿ. ಶಾಸಕರು ಶಾಶ್ವತವಾಗಿ ಅಲ್ಲೇ ಇರಲು ಸಾಧ್ಯವಿಲ್ಲ ಅಲ್ಲವೇ. ಅವರು ಇಲ್ಲಿಗೆ ಬರಲೇಬೇಕಲ್ಲ.</p>.<p>*ನಮ್ಮ ಶಾಸಕರನ್ನು ಮುಂಬೈ, ಪುಣೆಗೆ ಕರೆದುಕೊಂಡು ಹೋಗಲು ಬಿಜೆಪಿಯವರು ವಿಶೇಷ ವಿಮಾನ ಇಟ್ಟುಕೊಂಡಿದ್ದಾರೆ. ನಗರದಲ್ಲಿ ಆಟೊ ಸಂಚಾರ ಮಾಡಿದಂತೆ ಆ ವಿಮಾನ ಬೆಂಗಳೂರಿನಿಂದ ಮುಂಬೈಗೆ ಓಡಾಡುತ್ತದೆ.</p>.<p><strong>ಇನ್ನಷ್ಟು...</strong></p>.<p><a href="https://www.prajavani.net/stories/national/karnataka-cm-twice-ignores-652273.html" target="_blank"><strong>‘ಅಧಿಕಾರ’ಕ್ಕಾಗಿ ನಿಲ್ಲದ ಹಗ್ಗಜಗ್ಗಾಟ: ರಾಜ್ಯಪಾಲರಿಗೆ ‘ದೋಸ್ತಿ’ ಸಡ್ಡು</strong></a></p>.<p><strong><a href="https://www.prajavani.net/stories/stateregional/ktk-cm-twice-ignores-guvs-652221.html" target="_blank">ಶಾಸಕರಿಗೆ ಕೋಟಿ ಕೋಟಿ ಆಮಿಷ: ಬಿಜೆಪಿ ವಿರುದ್ಧ ಕಾಂಗ್ರೆಸ್–ಜೆಡಿಎಸ್ ಆರೋಪ</a></strong></p>.<p><a href="https://www.prajavani.net/stories/stateregional/karnataka-floor-test-speaker-652204.html" target="_blank"><strong>ರಾಜ್ಯಪಾಲರ ವಿರುದ್ಧ ಜೆಡಿಎಸ್–ಕಾಂಗ್ರೆಸ್ ಶಾಸಕರು ಕಿಡಿ</strong></a></p>.<p><a href="https://www.prajavani.net/district/bengaluru-city/bjp-aptbandhava-652262.html" target="_blank"><strong>ಬಿಜೆಪಿ ಮೇಲಿನ ದಾಳಿಗೆ ಮಾಧುಸ್ವಾಮಿ ‘ತಡೆಗೋಡೆ’</strong></a></p>.<p><a href="https://www.prajavani.net/stories/national/assembly-speaker-652225.html" target="_blank"><strong>ದರಿದ್ರ, ಹೊಲಸು ಎಲ್ಲವೂ ಹೊರಗೆ ಬರಲಿ: ಸಭಾಧ್ಯಕ್ಷರ ಆಕ್ರೋಶ</strong></a></p>.<p><a href="https://www.prajavani.net/stories/stateregional/karnataka-assembly-mla-652226.html" target="_blank"><strong>ಉಲ್ಟಾ ಹೊಡೆದ ‘ಗುಳ್ಳೆ ನರಿ ಶಾಸ್ತ್ರ’</strong></a></p>.<p><a href="https://www.prajavani.net/stories/stateregional/karnataka-floor-test-jds-652231.html" target="_blank"><strong>ಸುಪ್ರೀಂ ಕೋರ್ಟ್ ನೆರವಿನ ನಿರೀಕ್ಷೆಯಲ್ಲಿ ‘ದೋಸ್ತಿ’ಗಳು</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನ್ಯಾಯ ನಿರ್ಣಯದ ಆ ದಿನ ಬಂದೇ ಬರುತ್ತದೆ. ಅಂದು ನಮ್ಮ ನಡವಳಿಕೆ, ಕಾಯಕಗಳಿಗೆ ನಾವೇ ಉತ್ತರಿಸಬೇಕು. ಆ ಮಹತ್ವದ ದಿನ ನಮ್ಮ ಪರವಾಗಿ ವಾದಿಸಲು ವಕೀಲರೂ ಇರುವುದಿಲ್ಲ. ಬಂಧುಗಳು, ಅಭಿಮಾನಿಗಳು ಇರುವುದಿಲ್ಲ’.</p>.<p>ಬೈಬಲ್ನ ‘ಜಡ್ಜ್ಮೆಂಟ್ ಡೇ’ ಕುರಿತ ಪುಸ್ತಕವೊಂದರ ಸಾಲುಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಆ ಪಕ್ಷದ ನಾಯಕರನ್ನು ಚುಚ್ಚಿದ ಬಗೆ ಇದು.</p>.<p>ವಿಧಾನಸಭೆಯಲ್ಲಿ ಶುಕ್ರವಾರ ವಿಶ್ವಾಸಮತ ನಿರ್ಣಯದ ಮೇಲೆ ಚರ್ಚೆ ಆರಂಭಿಸಿದ ಅವರು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ಸುಮಾರು ಒಂದೂವರೆ ಗಂಟೆ ವಾಗ್ದಾಳಿ ನಡೆಸಿದರೂ ಬಿಜೆಪಿ ಸದಸ್ಯರು ಚಕಾರ ಎತ್ತಲಿಲ್ಲ.</p>.<p>‘ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುವಾಗ ನನಗೆ ಅನಿಸಿದ್ದು ಒಂದೇ. ನಾವು ಏನೇ ಮಾಡಿದರೂ, ಹೇಗೆ ನಡೆದುಕೊಂಡರೂ ಅಂತಿಮವಾಗಿ ಒಬ್ಬನಿಗೆ ಉತ್ತರ ಹೇಳಬೇಕು’ ಎಂದು ಕುಮಾರಸ್ವಾಮಿ ಹೇಳಿದರು.</p>.<p>‘ಧರಂ ಸಿಂಗ್ ಅವರ ಬೆನ್ನಿಗೆ ಚೂರಿ ಹಾಕಿದ್ದೆ. ಅವರ ಸಾವಿಗೆ ನಾನೇ ಕಾರಣ ಎಂದು ಯಡಿಯೂರಪ್ಪ ಅವರು ಈ ಹಿಂದೆ ಆರೋಪ ಮಾಡಿದ್ದರು. ಸಿಂಗ್ ಅವರು ತಂದೆ ಸಮಾನರು. ಅವರ ಸಾವಿಗೆ ನಾನು ಕಾರಣ ಅಲ್ಲ’ ಎಂದೂ ಅವರು ತಿರುಗೇಟು ನೀಡಿದರು.</p>.<p>‘ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದ ಮೊದಲ ದಿನದಿಂದಲೇ ಅತಂತ್ರಗೊಳಿಸುವ ಕೆಲಸ ವ್ಯವಸ್ಥಿತವಾಗಿ ನಡೆಯಿತು. ಸರ್ಕಾರ ಇವತ್ತು ಪತನಗೊಳ್ಳಲಿದೆ, ನಾಳೆ ಪತನಗೊಳ್ಳಲಿದೆ ಎಂದು ಸುದ್ದಿ ಹಬ್ಬಿಸಲಾಯಿತು. ಈ ಸರ್ಕಾರ ಈಗ ಅಂತಿಮ ಹಂತಕ್ಕೆ ತಲುಪಿದೆ. ನಾನು ಅಧಿಕಾರಕ್ಕೆ ಅಂಟಿ ಕುಳಿತವನು ಅಲ್ಲ. ಬಿಜೆಪಿಯವರು ಅಧಿಕಾರದ ಚುಕ್ಕಾಣಿ ಹಿಡಿಯುವ ಆತುರದಲ್ಲಿದ್ದಾರೆ. ನಮಗೆ ಬಿಟ್ಟ ಬಾಣ ಮುಂದಿನ ದಿನಗಳಲ್ಲಿ ಅವರಿಗೇ ತಿರುಗಿ ನಾಟಲಿದೆ’ ಎಂದು ಅವರು ಹೇಳಿದರು.</p>.<p>‘2008ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಯಿತು. ಬಿಜೆಪಿಯವರು ಯಾಮಾರಿಸಿದ್ದಾರೆ ಎಂದು ಆರೋಪಿಸಿ ಆರು ಪಕ್ಷೇತರ ಶಾಸಕರು ನನ್ನ ಬಳಿಗೆ ಬಂದರು. ನಾನು ಇಂತಹ ಚಟುವಟಿಕೆಗೆ ಬರುವುದಿಲ್ಲ ಎಂದೆ. ಬಳಿಕ ಬಿಜೆಪಿಯ ಸಚಿವರು ಹಾಗೂ ಶಾಸಕರು ರೆಸಾರ್ಟ್ಗೆ ಹೋದರು. ಆ ಶಾಸಕರು ನನ್ನನ್ನು ಬಳಸಿಕೊಂಡರು. ಆಗ ಸರ್ಕಾರವನ್ನು ಅತಂತ್ರಗೊಳಿಸಲು ಯತ್ನಿಸಿದ ಎಂ.ಪಿ.ರೇಣುಕಾಚಾರ್ಯ ಅವರು ಈಗ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ನಾಯಕತ್ವ ವಹಿಸಿಕೊಂಡಿದ್ದಾರೆ. ಬಾಗಿಲು ಕಾಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಛೇಡಿಸಿದರು.</p>.<p>‘ಅತೃಪ್ತ ಶಾಸಕರನ್ನು ಒಲಿಸಿಕೊಳ್ಳಲು ಯಡಿಯೂರಪ್ಪ ಅವರು, ತಪ್ಪಾಗಿದೆ, ತಿದ್ದಿಕೊಳ್ಳುವೆ ಎಂದರು. ನಾನು ಆ ರೀತಿ ಅಂಗಲಾಚುವುದಿಲ್ಲ. ಅಧಿಕಾರ ಶಾಶ್ವತ ಅಲ್ಲ. ನನಗೆ ಯಾವ ಆತಂಕವೂ ಇಲ್ಲ. ನಾನು ಸಾಂದರ್ಭಿಕ ಶಿಶು ಅಷ್ಟೇ. ದೇವರ ಆಶೀರ್ವಾದ ಇರುವವರೆಗೆ ಈ ಸರ್ಕಾರ ಇರುತ್ತದೆ’ ಎಂದು ತಿಳಿಸಿದರು.</p>.<p><strong>‘ಆಟೊದಂತೆ ವಿಶೇಷ ವಿಮಾನ ಓಡುತ್ತದೆ’</strong><br />*ನಮ್ಮ ಶಾಸಕರನ್ನು ಕೂಡಿ ಹಾಕಲು ಬಿಜೆಪಿಯವರು ಮುಂಬೈಯಲ್ಲಿ ಶಾಶ್ವತವಾಗಿ ಹೋಟೆಲ್ ಒಂದನ್ನು ಇಟ್ಟುಕೊಂಡಿದ್ದಾರೆ.</p>.<p>ಶಾಸಕರ ನೋಡಿಕೊಳ್ಳಲು ಯಾರೋ ಲಾಡ್ ಎಂಬುವರನ್ನು ಇಟ್ಟಿದ್ದಾರೆ. ಶಾಸಕರ ಕಾಯಲು ಬೌನ್ಸರ್ಗಳನ್ನು ಇಟ್ಟಿದ್ದಾರೆ. ಈ ಚಟುವಟಿಕೆಗಳನ್ನು ಎಷ್ಟು ದಿನ ನಡೆಸುತ್ತೀರಿ. ಶಾಸಕರು ಶಾಶ್ವತವಾಗಿ ಅಲ್ಲೇ ಇರಲು ಸಾಧ್ಯವಿಲ್ಲ ಅಲ್ಲವೇ. ಅವರು ಇಲ್ಲಿಗೆ ಬರಲೇಬೇಕಲ್ಲ.</p>.<p>*ನಮ್ಮ ಶಾಸಕರನ್ನು ಮುಂಬೈ, ಪುಣೆಗೆ ಕರೆದುಕೊಂಡು ಹೋಗಲು ಬಿಜೆಪಿಯವರು ವಿಶೇಷ ವಿಮಾನ ಇಟ್ಟುಕೊಂಡಿದ್ದಾರೆ. ನಗರದಲ್ಲಿ ಆಟೊ ಸಂಚಾರ ಮಾಡಿದಂತೆ ಆ ವಿಮಾನ ಬೆಂಗಳೂರಿನಿಂದ ಮುಂಬೈಗೆ ಓಡಾಡುತ್ತದೆ.</p>.<p><strong>ಇನ್ನಷ್ಟು...</strong></p>.<p><a href="https://www.prajavani.net/stories/national/karnataka-cm-twice-ignores-652273.html" target="_blank"><strong>‘ಅಧಿಕಾರ’ಕ್ಕಾಗಿ ನಿಲ್ಲದ ಹಗ್ಗಜಗ್ಗಾಟ: ರಾಜ್ಯಪಾಲರಿಗೆ ‘ದೋಸ್ತಿ’ ಸಡ್ಡು</strong></a></p>.<p><strong><a href="https://www.prajavani.net/stories/stateregional/ktk-cm-twice-ignores-guvs-652221.html" target="_blank">ಶಾಸಕರಿಗೆ ಕೋಟಿ ಕೋಟಿ ಆಮಿಷ: ಬಿಜೆಪಿ ವಿರುದ್ಧ ಕಾಂಗ್ರೆಸ್–ಜೆಡಿಎಸ್ ಆರೋಪ</a></strong></p>.<p><a href="https://www.prajavani.net/stories/stateregional/karnataka-floor-test-speaker-652204.html" target="_blank"><strong>ರಾಜ್ಯಪಾಲರ ವಿರುದ್ಧ ಜೆಡಿಎಸ್–ಕಾಂಗ್ರೆಸ್ ಶಾಸಕರು ಕಿಡಿ</strong></a></p>.<p><a href="https://www.prajavani.net/district/bengaluru-city/bjp-aptbandhava-652262.html" target="_blank"><strong>ಬಿಜೆಪಿ ಮೇಲಿನ ದಾಳಿಗೆ ಮಾಧುಸ್ವಾಮಿ ‘ತಡೆಗೋಡೆ’</strong></a></p>.<p><a href="https://www.prajavani.net/stories/national/assembly-speaker-652225.html" target="_blank"><strong>ದರಿದ್ರ, ಹೊಲಸು ಎಲ್ಲವೂ ಹೊರಗೆ ಬರಲಿ: ಸಭಾಧ್ಯಕ್ಷರ ಆಕ್ರೋಶ</strong></a></p>.<p><a href="https://www.prajavani.net/stories/stateregional/karnataka-assembly-mla-652226.html" target="_blank"><strong>ಉಲ್ಟಾ ಹೊಡೆದ ‘ಗುಳ್ಳೆ ನರಿ ಶಾಸ್ತ್ರ’</strong></a></p>.<p><a href="https://www.prajavani.net/stories/stateregional/karnataka-floor-test-jds-652231.html" target="_blank"><strong>ಸುಪ್ರೀಂ ಕೋರ್ಟ್ ನೆರವಿನ ನಿರೀಕ್ಷೆಯಲ್ಲಿ ‘ದೋಸ್ತಿ’ಗಳು</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>