‘ಹಗಲು ವೇಳೆ ಎಂಟು ಗಂಟೆ ತ್ರಿಫೇಸ್ ವಿದ್ಯುತ್ ನೀಡಬೇಕು. ವಿದ್ಯುತ್ ಪರಿವರ್ತಕಗಳ ಅಳವಡಿಕೆಗೆ ರೈತರಿಂದ ಹಣ ಪಡೆಯಬಾರದು, ಕಂದಾಯ ಬಾಕಿ ಮನ್ನಾ ಮಾಡಬೇಕು. ಸಾಲ ವಸೂಲಾತಿ ಮುಂದೂಡಬೇಕು. ಬರದ ಕಾರಣಕ್ಕೆ ಗುಳೆ ಹೋಗುವುದನ್ನು ತಡೆಯಲು ಆಯಾ ಗ್ರಾಮಗಳಲ್ಲೇ ಕೂಲಿ ಸಿಗುವಂತೆ ಮಾಡಬೇಕು. ಅದಕ್ಕೆ ತಗಲುವ ವೆಚ್ಚ ತಕ್ಷಣ ಬಿಡುಗಡೆ ಮಾಡಬೇಕು’ ಎಂದು ಬಹುತೇಕ ಸದಸ್ಯರು ಒತ್ತಾಯಿಸಿದರು.