ಈ ಮಾತಿಗೆ ಕಾಂಗ್ರೆಸ್ನ ಎಂ.ಕೃಷ್ಣಪ್ಪ ಆಕ್ಷೇಪ ವ್ಯಕ್ತಪಡಿಸಿದರು. ‘ಎಷ್ಟು ಬಾರಿ ತುರ್ತುಪರಿಸ್ಥಿತಿ ಬಗ್ಗೆ ಮಾತನಾಡುತ್ತೀರಿ. ಅವೆಲ್ಲ ಎಲ್ಲರಿಗೂ ಗೊತ್ತು. ಪದೇ ಪದೇ ಮಾತನಾಡುವ ಅಗತ್ಯವಿದೆಯೇ? ತಮ್ಮನ್ನು ಸಮರ್ಥಿಸಿಕೊಂಡು ಇಂದಿರಾಗಾಂಧಿಯಾಗಲಿ, ರಾಜ್ನಾರಾಯಣ್ ಅವರಾಗಲಿ ಇಲ್ಲಿಗೆ ಬಂದು ಮಾತನಾಡಲು ಸಾಧ್ಯವೇ?’ ಎಂದು ಪ್ರಶ್ನಿಸಿದರು. ಇದಕ್ಕೆ ಕಾಂಗ್ರೆಸ್ನ ಶ್ರಿನಿವಾಸಮಾನೆ ಅವರೂ ಧ್ವನಿಗೂಡಿಸಿದರು.