ಬೆಳಗಾವಿ ಅಧಿವೇಶನದ ಅವಧಿಯ ಉದ್ದಕ್ಕೂ ಸದ್ದು ಮಾಡಿದ್ದ ‘ನಾಯಕತ್ವ ಬದಲಾವಣೆ’ಯ ವಿಷಯ, ಕಲಾಪದ ಕೊನೇ ದಿನ ಮತ್ತೊಂದು ಮಜಲು ತಲುಪಿದೆ. ‘ಎರಡೂವರೆ ವರ್ಷದ ಒಪ್ಪಂದ ಆಗಿಲ್ಲ. ಹೈಕಮಾಂಡ್ ನನ್ನ ಪರ’ ಎಂದು ಸ್ಪಷ್ಟ ಧ್ವನಿಯಲ್ಲಿ ಹೇಳಿದ ಸಿದ್ದರಾಮಯ್ಯ ಅವರು ತಮ್ಮ ನಾಯಕತ್ವ ಅಬಾಧಿತ ಎಂದು ಶಾಸನ ಸಭೆಯಲ್ಲೇ ಸಾರಿದರು. ಅಂಕೋಲಾದ ಜಗದೀಶ್ವರಿ ಅಮ್ಮನವರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ‘ನನ್ನ ಮತ್ತು ಸಿದ್ದರಾಮಯ್ಯ ನಡುವೆ ಒಪ್ಪಂದ ಆಗಿದೆ’ ಎಂದು ತಮ್ಮ ವಾದ ಮುಂದಿಟ್ಟರು