ಈ ಬಗ್ಗೆ ಮಾತನಾಡಿದ ಡಾ.ಅಶೋಕ ಶೆಟ್ಟರ್, ‘ಗುಜರಾತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧ
ಪಟ್ಟಂತೆ ಇನ್ನೋವೇಟಿವ್ ಪಾಲಿಸಿ ಹೆಸರಿನಲ್ಲಿ ತಜ್ಞರ ತಂಡ ರಚಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ರೂಪಿಸಿದ ಈ ಕಾರ್ಯಪಡೆ ಒಟ್ಟಾರೆಯಾಗಿ ಭಿನ್ನವಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿ ದಿಸೆಯ ವಿಶಾಲವಾದ ವ್ಯಾಪ್ತಿ ಒಳಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನ ಮೇಲೆ ಭರವಸೆ ಇಟ್ಟು ಕಾರ್ಯಪಡೆಯ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಅವರಿಗೆ ಕೃತಜ್ಞನಾಗಿದ್ದೇನೆ’ ಎಂದು ಡಾ. ಅಶೋಕ ಶೆಟ್ಟರ್ ನುಡಿದರು.