ರಾಜ್ಯದಲ್ಲಿ ಹಿಜಾಬ್ ಮುಂದಿಟ್ಟು ಕೊಂಡು ಶುರುಮಾಡಿದ ವಿವಾದಗಳ ಸರಣಿ ಹಲಾಲ್, ಜಾತ್ರೆ– ಹಬ್ಬಗಳಲ್ಲಿ ಮುಸ್ಲಿಮ್ ವರ್ತಕರಿಗೆ ಬಹಿಷ್ಕಾರ, ಮಸೀದಿಗಳ ಧ್ವನಿವರ್ಧಕ ಬಳಕೆಗೆ ತಕರಾರು ಹೀಗೆ ದಿನಕ್ಕೊಂದು ವಿವಾದ ತಲೆ ಎತ್ತುತ್ತಲೇ ಇದೆ. ಇದರ ಮಧ್ಯೆಯೇ, ಬೆಂಗಳೂರಿನ ಜೆ.ಜೆ.ನಗರದಲ್ಲಿ ಸೋಮವಾರ ರಾತ್ರಿ ಬೈಕ್ ಡಿಕ್ಕಿ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಕಂಡಿತ್ತು.