‘ಸಿಇಒ ಹುದ್ದೆಗೆ ನೇಮಕಾತಿ ಮಾಡುವ ಮೊದಲು ಸರ್ಕಾರ ಯಾವುದೇ ಜಾಹೀರಾತು ನೀಡಿಲ್ಲ. ನೇಮಕಾತಿ ಬಗ್ಗೆ ಅಧಿಸೂಚನೆಯನ್ನೂ ಹೊರಡಿಸಿಲ್ಲ. ನೇರವಾಗಿ ಕೃಷ್ಣ ರೆಡ್ಡಿ ಅವರನ್ನು ನೇಮಿಸಿರುವುದು ಏಕಪಕ್ಷೀಯ ಆಯ್ಕೆ. ಈ ರೀತಿಯ ನೇಮಕಾತಿಯು ಸಾರ್ವಜನಿಕ ಹಿತದೃಷ್ಟಿಯಿಂದ ಸರಿಯಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ನಿವೃತ್ತಿ ಹೊಂದಿದ ಅಧಿಕಾರಿಗೆ ಪಿಂಚಣಿ ಸೌಲಭ್ಯದ ಜೊತೆಗೆ ಹೊಸ ಹುದ್ದೆ ಸೃಷ್ಟಿಸಿ ಸಂಬಳ, ಸರ್ಕಾರಿ ಕಚೇರಿ, ವಾಹನ, ಭತ್ಯೆ, ನೌಕರರು ಮತ್ತು ಇತರ ಸೌಲಭ್ಯಗಳನ್ನು ನೀಡಿರುವುದು ಜನರ ತೆರಿಗೆ ಹಣದ ದುರುಪಯೋಗವಾಗಿದೆ. ಈ ಎಲ್ಲ ಅಂಶಗಳನ್ನು ತಾವು ಗಮನಿಸಿ, ಕೃಷ್ಣ ರೆಡ್ಡಿ ಅವರ ನೇಮಕಾತಿಯನ್ನು ರದ್ದುಪಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದೂ ದೂರಿನಲ್ಲಿ ಅವರು ಆಗ್ರಹಿಸಿದ್ದಾರೆ.