ಶಿರೂರುಶ್ರೀಗಳ ಆತ್ಮಕ್ಕೆ ಇಲ್ಲಿಂದಲೇ ಶಾಂತಿ ಕೋರುತ್ತೇನೆ ಎಂದರು. ಅವರಿಗೆ ವಿಷ ನೀಡುವ ಪ್ರಮೇಯವೇ ಇಲ್ಲ. ಯಾರು ಇಂತಹ ಕೆಲಸ ಮಾಡಲು ಅವಕಾಶವಿಲ್ಲ. ಇಂತಹ ಅನುಮಾನ ಸೃಷ್ಟಿಸಿರುವುದು ಸರಿಯಲ್ಲ. ಸಂಶಯಕ್ಕೆ ಕಾರಣ ಬೇಕು. ಅಡುಗೆ ಪಾತ್ರೆ ಸರಿಯಿರಲಿಲ್ಲ. ಹೀಗಾಗಿ ಆಹಾರದೋಷದಿಂದ ತೊಂದರೆ ಆಗಿದೆ ಎಂದು ಅಣ್ಣಂದಿರೇ ಹೇಳಿದ್ದಾರೆ ಎಂದರು.