<p><strong>ಬೆಂಗಳೂರು</strong>: ಜೆಎಸ್ಡಬ್ಲ್ಯು ಸ್ಟೀಲ್ಸ್ ಕಂಪನಿಗೆ ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಜಮೀನನ್ನು ಕ್ರಯಪತ್ರದ ಮೂಲಕ ಹಸ್ತಾಂತರಿಸುವ ಸಂಪುಟ ಸಭೆಯ ತೀರ್ಮಾನವನ್ನು ವಿರೋಧಿಸಿ ಬಿಜೆಪಿಯ ನಾಲ್ವರು ಶಾಸಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.</p>.<p>ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇದೇ ಪ್ರಸ್ತಾವವನ್ನು ವಿರೋಧ ಪಕ್ಷದಲ್ಲಿದ್ದ ಬಿಜೆಪಿ ವಿರೋಧಿಸಿತ್ತು. ಈಗ ತದ್ವಿರುದ್ಧವಾಗಿ ನಿರ್ಣಯ ಕೈಗೊಂಡಿರುವುದನ್ನು ವಿರೋಧಿಸಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಕೆ. ಪೂರ್ಣಿಮಾ ಮತ್ತು ಉದಯ್ ಗರುಡಾಚಾರ್ ಪತ್ರ ಬರೆದಿದ್ದಾರೆ.</p>.<p>‘ಜಿಂದಾಲ್ ಕಂಪನಿಗೆ ಜಮೀನು ಕ್ರಯಕ್ಕೆ ನೀಡುವ ತೀರ್ಮಾನವು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದು ಭ್ರಷ್ಟಾಚಾರದ ವಿರುದ್ಧದ ಬಿಜೆಪಿಯ ಹೋರಾಟಕ್ಕೂ ವಿರೋಧವಾದುದು’ ಎಂದು ಈ ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.</p>.<p>ಕೋವಿಡ್ನಿಂದ ರಾಜ್ಯವು ಬಿಕ್ಕಟ್ಟಿನಲ್ಲಿರುವ ಸಂದರ್ಭದಲ್ಲಿ ಜೆಎಸ್ಡಬ್ಲ್ಯು ಸ್ಟೀಲ್ಸ್ಗೆ ಕಡಿಮೆ ದರಕ್ಕೆ ಜಮೀನು ನೀಡುವುದನ್ನು ಈ ಶಾಸಕರು ವಿರೋಧಿಸಿದ್ದಾರೆ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ವ್ಯಕ್ತಪಡಿಸಿರುವ ಅಭಿಪ್ರಾಯವನ್ನೂ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.</p>.<p>‘ಕುಮಾರಸ್ವಾಮಿ ನೇತೃತ್ವದ ಸರ್ಕಾರ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲು ಹೊರಟಾಗ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಿದ್ದೆವು. ಈ ವಿಚಾರದಲ್ಲಿ ಆಗ ಬಿಜೆಪಿಯ ನಿಲುವು ಏನಾಗಿತ್ತು ಎಂಬುದು ರಾಜ್ಯದ ಜನರಿಗೆ ಸ್ಪಷ್ಟವಾಗಿ ತಿಳಿದಿದೆ. ಕುಮಾರಸ್ವಾಮಿ ಸರ್ಕಾರ ದೊಡ್ಡ ಮೊತ್ತದ ಕಿಕ್ ಬ್ಯಾಕ್ ಪಡೆದು ಜಮೀನು ಮಾರುತ್ತಿದೆ ಎಂದು ನಾವು ಆಗ ಆರೋಪಿಸಿದ್ದೆವು’ ಎಂದು ಪತ್ರದಲ್ಲಿ ಈ ಶಾಸಕರು ನೆನಪಿಸಿದ್ದಾರೆ.</p>.<p>‘ಬಿಜೆಪಿಯ ಪ್ರಬಲ ಪ್ರತಿಭಟನೆಗೆ ಮಣಿದ ಸಮ್ಮಿಶ್ರ ಸರ್ಕಾರ ಪ್ರಸ್ತಾವವನ್ನು ಕೈಬಿಟ್ಟಿತ್ತು. ಈಗ ಅದೇ ಪ್ರಸ್ತಾವಕ್ಕೆ ಬಿಜೆಪಿ ಸರ್ಕಾರ ಒಪ್ಪಿಗೆ ನೀಡಿರುವುದು ಆಘಾತಕಾರಿ ಬೆಳವಣಿಗೆ. ಸರ್ಕಾರದ ನಿರ್ಧಾರವು ಬಿಜೆಪಿ ಕಾರ್ಯಕರ್ತರ ಹೋರಾಟವನ್ನೇ ಅವಮಾನಿಸುವಂತಿದೆ’ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.</p>.<p>ಜಿಂದಾಲ್ ಕಂಪನಿಗೆ ಜಮೀನು ಮಾರಾಟ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತಕ್ಷಣವೇ ಶಾಸಕಾಂಗ ಪಕ್ಷದ ಸಭೆಯನ್ನು ಕರೆದು ಚರ್ಚಿಸುವಂತೆಯೂ ಈ ಶಾಸಕರು ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.</p>.<p>ಬಿಜೆಪಿ ಶಾಸಕರಾದ ಅಭಯ್ ಪಾಟೀಲ್, ವಿ. ಸುನೀಲ್ ಕುಮಾರ್ ಮತ್ತು ಸತೀಶ್ ರೆಡ್ಡಿ ಕೂಡ ಈ ಪತ್ರವನ್ನು ಬೆಂಬಲಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಜೆಎಸ್ಡಬ್ಲ್ಯು ಸ್ಟೀಲ್ಸ್ ಕಂಪನಿಗೆ ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಜಮೀನನ್ನು ಕ್ರಯಪತ್ರದ ಮೂಲಕ ಹಸ್ತಾಂತರಿಸುವ ಸಂಪುಟ ಸಭೆಯ ತೀರ್ಮಾನವನ್ನು ವಿರೋಧಿಸಿ ಬಿಜೆಪಿಯ ನಾಲ್ವರು ಶಾಸಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.</p>.<p>ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇದೇ ಪ್ರಸ್ತಾವವನ್ನು ವಿರೋಧ ಪಕ್ಷದಲ್ಲಿದ್ದ ಬಿಜೆಪಿ ವಿರೋಧಿಸಿತ್ತು. ಈಗ ತದ್ವಿರುದ್ಧವಾಗಿ ನಿರ್ಣಯ ಕೈಗೊಂಡಿರುವುದನ್ನು ವಿರೋಧಿಸಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಕೆ. ಪೂರ್ಣಿಮಾ ಮತ್ತು ಉದಯ್ ಗರುಡಾಚಾರ್ ಪತ್ರ ಬರೆದಿದ್ದಾರೆ.</p>.<p>‘ಜಿಂದಾಲ್ ಕಂಪನಿಗೆ ಜಮೀನು ಕ್ರಯಕ್ಕೆ ನೀಡುವ ತೀರ್ಮಾನವು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದು ಭ್ರಷ್ಟಾಚಾರದ ವಿರುದ್ಧದ ಬಿಜೆಪಿಯ ಹೋರಾಟಕ್ಕೂ ವಿರೋಧವಾದುದು’ ಎಂದು ಈ ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.</p>.<p>ಕೋವಿಡ್ನಿಂದ ರಾಜ್ಯವು ಬಿಕ್ಕಟ್ಟಿನಲ್ಲಿರುವ ಸಂದರ್ಭದಲ್ಲಿ ಜೆಎಸ್ಡಬ್ಲ್ಯು ಸ್ಟೀಲ್ಸ್ಗೆ ಕಡಿಮೆ ದರಕ್ಕೆ ಜಮೀನು ನೀಡುವುದನ್ನು ಈ ಶಾಸಕರು ವಿರೋಧಿಸಿದ್ದಾರೆ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ವ್ಯಕ್ತಪಡಿಸಿರುವ ಅಭಿಪ್ರಾಯವನ್ನೂ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.</p>.<p>‘ಕುಮಾರಸ್ವಾಮಿ ನೇತೃತ್ವದ ಸರ್ಕಾರ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲು ಹೊರಟಾಗ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಿದ್ದೆವು. ಈ ವಿಚಾರದಲ್ಲಿ ಆಗ ಬಿಜೆಪಿಯ ನಿಲುವು ಏನಾಗಿತ್ತು ಎಂಬುದು ರಾಜ್ಯದ ಜನರಿಗೆ ಸ್ಪಷ್ಟವಾಗಿ ತಿಳಿದಿದೆ. ಕುಮಾರಸ್ವಾಮಿ ಸರ್ಕಾರ ದೊಡ್ಡ ಮೊತ್ತದ ಕಿಕ್ ಬ್ಯಾಕ್ ಪಡೆದು ಜಮೀನು ಮಾರುತ್ತಿದೆ ಎಂದು ನಾವು ಆಗ ಆರೋಪಿಸಿದ್ದೆವು’ ಎಂದು ಪತ್ರದಲ್ಲಿ ಈ ಶಾಸಕರು ನೆನಪಿಸಿದ್ದಾರೆ.</p>.<p>‘ಬಿಜೆಪಿಯ ಪ್ರಬಲ ಪ್ರತಿಭಟನೆಗೆ ಮಣಿದ ಸಮ್ಮಿಶ್ರ ಸರ್ಕಾರ ಪ್ರಸ್ತಾವವನ್ನು ಕೈಬಿಟ್ಟಿತ್ತು. ಈಗ ಅದೇ ಪ್ರಸ್ತಾವಕ್ಕೆ ಬಿಜೆಪಿ ಸರ್ಕಾರ ಒಪ್ಪಿಗೆ ನೀಡಿರುವುದು ಆಘಾತಕಾರಿ ಬೆಳವಣಿಗೆ. ಸರ್ಕಾರದ ನಿರ್ಧಾರವು ಬಿಜೆಪಿ ಕಾರ್ಯಕರ್ತರ ಹೋರಾಟವನ್ನೇ ಅವಮಾನಿಸುವಂತಿದೆ’ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.</p>.<p>ಜಿಂದಾಲ್ ಕಂಪನಿಗೆ ಜಮೀನು ಮಾರಾಟ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತಕ್ಷಣವೇ ಶಾಸಕಾಂಗ ಪಕ್ಷದ ಸಭೆಯನ್ನು ಕರೆದು ಚರ್ಚಿಸುವಂತೆಯೂ ಈ ಶಾಸಕರು ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.</p>.<p>ಬಿಜೆಪಿ ಶಾಸಕರಾದ ಅಭಯ್ ಪಾಟೀಲ್, ವಿ. ಸುನೀಲ್ ಕುಮಾರ್ ಮತ್ತು ಸತೀಶ್ ರೆಡ್ಡಿ ಕೂಡ ಈ ಪತ್ರವನ್ನು ಬೆಂಬಲಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>