ಲೋಕಾಯುಕ್ತದ ಬೆಂಗಳೂರು ನಗರ ಎಸ್ಪಿ ಕೆ.ವಿ. ಅಶೋಕ್ ನೇತೃತ್ವದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಹಲವು ಅಧಿಕಾರಿಗಳು ಸಿಬ್ಬಂದಿ ಪಾಲ್ಗೊಂಡಿದ್ದರು. ಕೆೆಎಸ್ಡಿಎಲ್ನಲ್ಲಿ ಕಚ್ಚಾವಸ್ತು ಖರೀದಿಗೆ ಟೆಂಡರ್ ಆಹ್ವಾನ, ಬಿಡ್ ಅಂತಿಮಗೊಳಿಸಿರುವುದು, ಕಚ್ಚಾ ವಸ್ತುಗಳ ಮಾದರಿ ಪರೀಕ್ಷೆ, ಹಣ ಪಾವತಿಗೆ ಸಂಬಂಧಿಸಿದ ಹಲವು ಕಡತಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.