ಇದು ಬದಲಾವಣೆಯ ಬರ್ತಡೇ. ಬೆಂಬಲಗರು, ಅಪ್ಪಾಜಿ ಅಭಿಮಾನಿಗಳು ಹಾಗೂ ನಂಬಿದ ಹಿತೈಷಿಗಳ ಹಿತದೃಷ್ಟಿಯಿಂದ ಖಚಿತ ನಿರ್ಧಾರ ತೆಗೆದುಕೊಳ್ಳಲೆಬೇಕಿದೆ. ದಶಕದ ಅವಧಿಯಲ್ಲಿ ಜೆಡಿಎಸ್ ಒಳ್ಳೆಯ ಅವಕಾಶಗಳನ್ನು ನೀಡಿದೆ. ಎಚ್.ಡಿ.ಕುಮಾರಸ್ವಾಮಿ ಅಣ್ಣನಂತೆ ಇದ್ದರು. ಕುಮಾರಣ್ಣ, ದೇವೇಗೌಡರನ್ನು ಎಂದೂ ಮರೆಯುವುದಿಲ್ಲ. ಆದರೆ, ಕೆಲವು ಬೆಳವಣಿಗೆಗಳು ಬೇಸರ ತರಿಸಿದವು. ನಾನು ಎಂದೂ ಅಧಿಕಾರ ಬಯಸಲಿಲ್ಲ. ಜತೆಗಿದ್ದವರಿಗೆ ಅವಕಾಶಗಳು ದೊರೆಯದೇ ಇದ್ದಾಗ ನೋವಾಗಿದ್ದು ಸತ್ಯ ಎಂದು ಮನದಾಳ ತೋಡಿಕೊಂಡರು.