‘ಶಿವಮೊಗ್ಗದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಹಾಗೂ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ನಡುವಿನ ‘ಧಾರಾವಾಹಿ’ಗೂ ಕಾಂಗ್ರೆಸ್ಗೂ ಸಂಬಂಧವಿಲ್ಲ. ಅದರ ನಿರ್ಮಾಣ ಹಾಗೂ ಪ್ರಾಯೋಜಕತ್ವವೂ ನಮ್ಮದಲ್ಲ’ ಎಂದು ಪ್ರತಿಕ್ರಿಯಿಸಿದ ಅವರು, ‘ಆಯನೂರು ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಲಿದೆ ಎಂಬುದೆಲ್ಲ ಊಹಾಪೋಹ’ ಎಂದು ಹೇಳಿದರು.