‘ಸ್ವಾಭಿಮಾನಕ್ಕೆ ಪೆಟ್ಟಾಗಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ, ಶಾಸಕ ನಾಗಿ ಇರುತ್ತೇನೆ’ ಎಂದು ಮಾಧುಸ್ವಾಮಿ ತಮ್ಮ ಆಪ್ತರ ಬಳಿ ಅಸಮಾಧಾನ ಸಹ ವ್ಯಕ್ತಪಡಿಸಿದ್ದರು. ಕೆಲ ಸಚಿವರು ಸೇರಿದಂತೆ ಬಹಳಷ್ಟು ಮಂದಿ ಕರೆ ಮಾಡಿದರೂ ಕೆಲವು ಕರೆಗಳನ್ನು ಮಾತ್ರ ಸ್ವೀಕರಿಸಿದ್ದರು. ಆಪ್ತ ಸಹಾಯಕರಿಗೂ ಕರೆಗಳನ್ನು ಸ್ವೀಕರಿಸದಂತೆ ಸೂಚಿಸಿದ್ದು, ಸಂಪರ್ಕಕ್ಕೆ ಸಿಕ್ಕಿರಲಿಲ್ಲ.