<p><strong>ಭೋಪಾಲ್: </strong>‘ನಮ್ಮ ಶಾಸಕರು ಖರೀದಿಗಿಲ್ಲ’ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಹೇಳಿದ್ದಾರೆ. ಸರ್ಕಾರ ಐದು ವರ್ಷದ ಅವಧಿ ಪೂರ್ಣಗೊಳಿಸುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿನ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಪತನದ ಮರುದಿನವೇ ಅವರು ಈ ಹೇಳಿಕೆ ಕೊಟ್ಟಿದ್ದಾರೆ.</p>.<p>ಆದರೆ, ‘ನಮ್ಮ ನಂ. 1 ಅಥವಾ ನಂ. 2 ನಾಯಕರು ಸೂಚನೆ ಕೊಟ್ಟರೆ ನಿಮ್ಮ ಸರ್ಕಾರ 24 ಗಂಟೆಯೂ ಉಳಿಯದು’ ಎಂದು ವಿರೋಧ ಪಕ್ಷದ ನಾಯಕ ಗೋಪಾಲ ಭಾರ್ಗವ ಅವರು ಮಂಗಳವಾರ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ, ಧೈರ್ಯ ಇದ್ದರೆ ಅವಿಶ್ವಾಸ ನಿರ್ಣಯ ಮಂಡಿಸಿ ಎಂದು ಸವಾಲು ಒಡ್ಡಿದ್ದಾರೆ.</p>.<p>‘ನಿಮ್ಮ ನಂ. 1 ಮತ್ತು ನಂ. 2 ನಾಯಕರಿಗೆ ಇಂತಹ ಸೂಚನೆ ನೀಡದಿರುವಷ್ಟು ಬುದ್ಧಿ ಇದೆ’ ಎಂದೂ ಕಮಲನಾಥ್ ಹೇಳಿದ್ದಾರೆ.</p>.<p>ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ತಮ್ಮ ರಾಜಕೀಯ ಜೀವನ ಕಳಂಕರಹಿತವಾದುದು ಎಂದರು. ಆಗ ಮಧ್ಯಪ್ರವೇಶಿಸಿದ ಭಾರ್ಗವ ‘ನಿಮ್ಮ ಸರ್ಕಾರ ಪತನದ ದಿನಗಣನೆ ಆರಂಭವಾಗಿದೆ’ ಎಂದು ಕುಟುಕಿದರು. ಆದರೆ, ಈ ಮಧ್ಯಪ್ರವೇಶಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಸರ್ಕಾರ ಉರುಳಿಸುವುದಕ್ಕಾಗಿ ಶಾಸಕರನ್ನು ಖರೀದಿಸಲು ಬಿಜೆಪಿ ಮುಂದಾಗಿದೆ ಎಂದರು. ‘ಕಾಂಗ್ರೆಸ್ ಶಾಸಕರು ಖರೀದಿಗಿಲ್ಲ’ ಎಂದು ಈ ವೇಳೆ ಕಮಲನಾಥ್ ಹೇಳಿದರು.</p>.<p><strong>ಕಾಂಗ್ರೆಸ್ನತ್ತ ಇಬ್ಬರು ಬಿಜೆಪಿ ಶಾಸಕರು</strong></p>.<p>ಮಧ್ಯಪ್ರದೇಶದ ಬಿಜೆಪಿ ಶಾಸಕರಾದ ನಾರಾಯಣ ತ್ರಿಪಾಠಿ, ಶರದ್ ಕೋಲ್ ಅವರು ಅಪರಾಧ ಕಾನೂನು ಮಸೂದೆಯ ಪರವಾಗಿ ಮತ ಹಾಕಿದ್ದಾರೆ. ಈ ಇಬ್ಬರೂ ಹಿಂದೆ ಕಾಂಗ್ರೆಸ್ನಲ್ಲಿ ಇದ್ದರು. ಈಗ, ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದಿದ್ದಾರೆ.</p>.<p>230 ಸದಸ್ಯರ ಸದನದಲ್ಲಿ ಕಾಂಗ್ರೆಸ್ಗೆ 120 ಸದಸ್ಯರ ಬೆಂಬಲ ಇದೆ. ಮಸೂದೆಯನ್ನು ಮತಕ್ಕೆ ಹಾಕಿದಾಗ ಅದರ ಪರವಾಗಿ 122 ಮತಗಳು ದಾಖಲಾಗಿವೆ.ಇದು ತಮ್ಮ ‘ಘರ್ ವಾಪ್ಸಿ’ ಎಂದು ಈ ಶಾಸಕರು ಹೇಳಿದ್ದಾರೆ.</p>.<p>‘ನಮ್ಮ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಬಿಜೆಪಿಯ ಇಬ್ಬರು ಶಾಸಕರು ಸರ್ಕಾರದ ಪರವಾಗಿ ಮತ ಹಾಕಿದ್ದಾರೆ’ ಎಂದು ಕಮಲನಾಥ್ ಹೇಳಿದ್ದಾರೆ.</p>.<p><strong>ಮಧ್ಯ ಪ್ರದೇಶ ಬಲಾಬಲ</strong></p>.<p><strong>ಒಟ್ಟು 230 ಬಹುಮತ: 116</strong></p>.<p>ಕಾಂಗ್ರೆಸ್ 114</p>.<p>ಪಕ್ಷೇತರರು 4*</p>.<p>ಎಸ್ಪಿ 2*</p>.<p>ಬಿಎಸ್ಪಿ 1*</p>.<p>ಬಿಜೆಪಿ 109</p>.<p>(*ಪಕ್ಷೇತರರು, ಎಸ್ಪಿ, ಬಿಎಸ್ಪಿ ಬೆಂಬಲದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದೆ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭೋಪಾಲ್: </strong>‘ನಮ್ಮ ಶಾಸಕರು ಖರೀದಿಗಿಲ್ಲ’ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಹೇಳಿದ್ದಾರೆ. ಸರ್ಕಾರ ಐದು ವರ್ಷದ ಅವಧಿ ಪೂರ್ಣಗೊಳಿಸುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿನ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಪತನದ ಮರುದಿನವೇ ಅವರು ಈ ಹೇಳಿಕೆ ಕೊಟ್ಟಿದ್ದಾರೆ.</p>.<p>ಆದರೆ, ‘ನಮ್ಮ ನಂ. 1 ಅಥವಾ ನಂ. 2 ನಾಯಕರು ಸೂಚನೆ ಕೊಟ್ಟರೆ ನಿಮ್ಮ ಸರ್ಕಾರ 24 ಗಂಟೆಯೂ ಉಳಿಯದು’ ಎಂದು ವಿರೋಧ ಪಕ್ಷದ ನಾಯಕ ಗೋಪಾಲ ಭಾರ್ಗವ ಅವರು ಮಂಗಳವಾರ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ, ಧೈರ್ಯ ಇದ್ದರೆ ಅವಿಶ್ವಾಸ ನಿರ್ಣಯ ಮಂಡಿಸಿ ಎಂದು ಸವಾಲು ಒಡ್ಡಿದ್ದಾರೆ.</p>.<p>‘ನಿಮ್ಮ ನಂ. 1 ಮತ್ತು ನಂ. 2 ನಾಯಕರಿಗೆ ಇಂತಹ ಸೂಚನೆ ನೀಡದಿರುವಷ್ಟು ಬುದ್ಧಿ ಇದೆ’ ಎಂದೂ ಕಮಲನಾಥ್ ಹೇಳಿದ್ದಾರೆ.</p>.<p>ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ತಮ್ಮ ರಾಜಕೀಯ ಜೀವನ ಕಳಂಕರಹಿತವಾದುದು ಎಂದರು. ಆಗ ಮಧ್ಯಪ್ರವೇಶಿಸಿದ ಭಾರ್ಗವ ‘ನಿಮ್ಮ ಸರ್ಕಾರ ಪತನದ ದಿನಗಣನೆ ಆರಂಭವಾಗಿದೆ’ ಎಂದು ಕುಟುಕಿದರು. ಆದರೆ, ಈ ಮಧ್ಯಪ್ರವೇಶಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಸರ್ಕಾರ ಉರುಳಿಸುವುದಕ್ಕಾಗಿ ಶಾಸಕರನ್ನು ಖರೀದಿಸಲು ಬಿಜೆಪಿ ಮುಂದಾಗಿದೆ ಎಂದರು. ‘ಕಾಂಗ್ರೆಸ್ ಶಾಸಕರು ಖರೀದಿಗಿಲ್ಲ’ ಎಂದು ಈ ವೇಳೆ ಕಮಲನಾಥ್ ಹೇಳಿದರು.</p>.<p><strong>ಕಾಂಗ್ರೆಸ್ನತ್ತ ಇಬ್ಬರು ಬಿಜೆಪಿ ಶಾಸಕರು</strong></p>.<p>ಮಧ್ಯಪ್ರದೇಶದ ಬಿಜೆಪಿ ಶಾಸಕರಾದ ನಾರಾಯಣ ತ್ರಿಪಾಠಿ, ಶರದ್ ಕೋಲ್ ಅವರು ಅಪರಾಧ ಕಾನೂನು ಮಸೂದೆಯ ಪರವಾಗಿ ಮತ ಹಾಕಿದ್ದಾರೆ. ಈ ಇಬ್ಬರೂ ಹಿಂದೆ ಕಾಂಗ್ರೆಸ್ನಲ್ಲಿ ಇದ್ದರು. ಈಗ, ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದಿದ್ದಾರೆ.</p>.<p>230 ಸದಸ್ಯರ ಸದನದಲ್ಲಿ ಕಾಂಗ್ರೆಸ್ಗೆ 120 ಸದಸ್ಯರ ಬೆಂಬಲ ಇದೆ. ಮಸೂದೆಯನ್ನು ಮತಕ್ಕೆ ಹಾಕಿದಾಗ ಅದರ ಪರವಾಗಿ 122 ಮತಗಳು ದಾಖಲಾಗಿವೆ.ಇದು ತಮ್ಮ ‘ಘರ್ ವಾಪ್ಸಿ’ ಎಂದು ಈ ಶಾಸಕರು ಹೇಳಿದ್ದಾರೆ.</p>.<p>‘ನಮ್ಮ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಬಿಜೆಪಿಯ ಇಬ್ಬರು ಶಾಸಕರು ಸರ್ಕಾರದ ಪರವಾಗಿ ಮತ ಹಾಕಿದ್ದಾರೆ’ ಎಂದು ಕಮಲನಾಥ್ ಹೇಳಿದ್ದಾರೆ.</p>.<p><strong>ಮಧ್ಯ ಪ್ರದೇಶ ಬಲಾಬಲ</strong></p>.<p><strong>ಒಟ್ಟು 230 ಬಹುಮತ: 116</strong></p>.<p>ಕಾಂಗ್ರೆಸ್ 114</p>.<p>ಪಕ್ಷೇತರರು 4*</p>.<p>ಎಸ್ಪಿ 2*</p>.<p>ಬಿಎಸ್ಪಿ 1*</p>.<p>ಬಿಜೆಪಿ 109</p>.<p>(*ಪಕ್ಷೇತರರು, ಎಸ್ಪಿ, ಬಿಎಸ್ಪಿ ಬೆಂಬಲದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದೆ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>