'ಕೊರೊನಾ ಸೋಂಕಿನಿಂದ ಹೆಚ್ಚಿನ ಅನಾಹುತ ಆಗದಂತೆ ತಡೆಯುವ ಮತ್ತು ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದ್ದು, ರಾಜ್ಯದ ಜಿನ ಮಂದಿರಗಳಲ್ಲಿ ಮತ್ತು ಮಹಾವೀರ ಭವನಗಳಲ್ಲಿ ಯಾವುದೇ ರೀತಿಯ ಜಯಂತ್ಯುತ್ಸವ ಅಥವಾ ಮೆರವಣಿಗೆ, ಸಾಮೂಹಿಕ ಪೂಜಾ-ಅಭಿಷೇಕ ಮಹೋತ್ಸವ ಜರುಗಿಸುವಂತಿಲ್ಲ' ಎಂದು ಅಸೋಸಿಯೇಷನ್ ಅಧ್ಯಕ್ಷ ಬಿ. ಪ್ರಸನ್ನಯ್ಯ ಹೇಳಿದ್ದಾರೆ.