‘ಆರೋಪಿಯು ಬಿ.ಸೋಮಶೇಖರ್, ಸೂರ್ಯ, ಸೋಮು, ಸೋಮಶೇಖರಚಾರಿ, ಸುರೇಶ್ ಮುಂತಾದ ಹೆಸರುಗಳಿಂದ ದರೋಡೆ ಮಾಡುತ್ತಿದ್ದ. ಆತನ ಮೇಲೆ ಮಂಡ್ಯ, ತುಮಕೂರು, ರಾಮನಗರ, ಹಾಸನ ಪೊಲೀಸ್ ಠಾಣೆಗಳಲ್ಲಿ 45 ದರೋಡೆ ಪ್ರಕರಣ ದಾಖಲಾಗಿವೆ. ಸದ್ಯ 22 ಪ್ರಕರಣಗಳನ್ನು ಭೇದಿಸಿ ಆಭರಣ ವಶಕ್ಕೆ ಪಡೆಯಲಾಗಿದೆ. ನಾಗಮಂಗಲ ಹಾಗೂ ಬೆಳ್ಳೂರು ಠಾಣೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ’ ಎಂದರು.