‘ಶುಕ್ರವಾರ ರಾತ್ರಿ 10 ಗಂಟೆಗೆ ಮಾಹಿತಿ ಪಡೆದ ಕರಾವಳಿ ಕಾವಲು ಪಡೆ ಮಂಗಳೂರು ಕೇಂದ್ರ ‘ಸುಜಯ್’ ಮತ್ತು ‘ವಿಕ್ರಮ್’ ಹಡಗಿನೊಂದಿಗೆ ತಕ್ಷಣ ಕಾರ್ಯಪ್ರವೃತ್ತವಾಗಿ ರಾತ್ರಿ 12.30ಕ್ಕೆ ಘಟನಾ ಸ್ಥಳಕ್ಕೆ ತಲುಪಿತು. ರಾತ್ರಿ 1.30ಕ್ಕೆ ಹಡಗಿನಲ್ಲಿದ್ದ ಸಂಶೋಧಕರು, ಸಿಬ್ಬಂದಿಯನ್ನು ರಕ್ಷಿಸಿ, ಬೆಂಕಿ ನಂದಿಸಿದೆ’ ಎಂದು ಕರಾವಳಿ ಕಾವಲು ಪಡೆಯ ಕಮಾಂಡೆಂಟ್ ಎಸ್.ಎಸ್. ದಸಿಲ್ ತಿಳಿಸಿದ್ದಾರೆ.