<p><strong>ನವದೆಹಲಿ</strong>: ಹಲವು ಲೋಕಸಭಾ, ರಾಜ್ಯಸಭಾ ಸಂಸದರು ವಾಸವಿರುವ, ನವದೆಹಲಿಯ ಬ್ರಹ್ಮಪುತ್ರ ವಸತಿ ಸಮುಚ್ಚಯದಲ್ಲಿ ಶನಿವಾರ ಮಧ್ಯಾಹ್ನ ಭಾರಿ ಬೆಂಕಿ ಅವಘಡ ಸಂಭವಿಸಿದೆ.</p>.<p>‘ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಮುಂಭಾಗದಲ್ಲಿರುವ ಕಟ್ಟಡದಲ್ಲಿ ಸಂಭವಿಸಿದ ದುರಂತದಲ್ಲಿ ಯಾರೂ ಮೃತಪಟ್ಟಿಲ್ಲ’ ಎಂದು ದೆಹಲಿಯ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಕೆಲವು ಮಕ್ಕಳು ಗಾಯಗೊಂಡಿದ್ದು, ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.</p>.<p class="title">‘ಬಾಬಾ ಖರಗ್ ಸಿಂಗ್ ಮಾರ್ಗದಲ್ಲಿರುವ ಬ್ರಹ್ಮಪುತ್ರ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮಧ್ಯಾಹ್ನ 1.22ಕ್ಕೆ ಕರೆಬಂದಿತ್ತು. ತಕ್ಷಣವೇ 14 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತೆರಳಿ, ಮಧ್ಯಾಹ್ನ 2.10ಕ್ಕೆ ಬೆಂಕಿ ನಂದಿಸಿದವು’ ಎಂದು ಹೇಳಿದ್ದಾರೆ.</p>.<p class="bodytext">2020ರಲ್ಲಿ ಈ ಅಪಾರ್ಟ್ಮೆಂಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.</p>.<p class="bodytext">‘ಕೆಲವರು ಪಟಾಕಿ ಸಿಡಿಸಿದ್ದರಿಂದ ಕೆಳಭಾಗದಲ್ಲಿ ಸೋಫಾಕ್ಕೆ ಬೆಂಕಿ ಹತ್ತಿಕೊಂಡಿತ್ತು. ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿತು’ ಎಂದು ಸ್ಥಳೀಯರು ತಿಳಿಸಿದ್ದಾರೆ. </p>.<p class="bodytext">ಕಟ್ಟಡದಲ್ಲಿ ಹೊಗೆ ದಟ್ಟೈಸಿರುವ ವಿಡಿಯೊಗಳು ಹರಿದಾಡಿವೆ.</p>.<p class="bodytext">‘ಕಟ್ಟಡದ ನೆಲಮಹಡಿಯಲ್ಲಿದ್ದ (ಸೆಲ್ಲಾರ್) ಸೋಫಾಕ್ಕೆ ಬೆಂಕಿ ಹತ್ತಿಕೊಂಡಿತ್ತು. ಹೊಗೆ ಮೇಲ್ಬಾಗಕ್ಕೆ ಆವರಿಸಿದ್ದರಿಂದ, ಮೇಲಿನ ಮಹಡಿಗಳಲ್ಲಿಯೂ ಹಾನಿ ಸಂಭವಿಸಿತು’ ಎಂದು ದೆಹಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಭೂಪೇಂದ್ರ ಪ್ರಕಾಶ್ ತಿಳಿಸಿದ್ದಾರೆ.</p>.<p class="bodytext">‘ಬೆಂಕಿ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ,</p>.<p class="bodytext">‘ನಾನು ಕೆಲಸ ಮಾಡುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿತು. ಆಭರಣ, ಬಟ್ಟೆ, ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳು ಬೆಂಕಿಗೆ ಆಹುತಿಯಾದವು’ ಎಂದು ಉತ್ತರಾಖಂಡ ಸಂಸದರೊಬ್ಬರ ಆಪ್ತ ಸಹಾಯಕ ಕಮಲ್ ತಿಳಿಸಿದ್ದಾರೆ.</p>.<p class="bodytext">‘ಕೆಳಹಂತದ ಮೂರು ಮಹಡಿಗಳಲ್ಲಿ ಸಂಸದರ ಆಪ್ತ ಸಹಾಯಕರು, ಸಿಬ್ಬಂದಿಗೆ ಮನೆಗಳನ್ನು ನೀಡಲಾಗಿತ್ತು. ನಾಲ್ಕನೇ ಮಹಡಿಯಿಂದ ಮೇಲ್ಭಾಗದಲ್ಲಿ ಸಂಸದರಿಗೆ ವಸತಿ ನೀಡಲಾಗಿತ್ತು. ಈಗ ಕೆಳಹಂತದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ನೌಕರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಅವರಿಗೆ ನೆರವಾಗಬೇಕು’ ಎಂದು ಅವರು ಮನವಿ ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಹಲವು ಲೋಕಸಭಾ, ರಾಜ್ಯಸಭಾ ಸಂಸದರು ವಾಸವಿರುವ, ನವದೆಹಲಿಯ ಬ್ರಹ್ಮಪುತ್ರ ವಸತಿ ಸಮುಚ್ಚಯದಲ್ಲಿ ಶನಿವಾರ ಮಧ್ಯಾಹ್ನ ಭಾರಿ ಬೆಂಕಿ ಅವಘಡ ಸಂಭವಿಸಿದೆ.</p>.<p>‘ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಮುಂಭಾಗದಲ್ಲಿರುವ ಕಟ್ಟಡದಲ್ಲಿ ಸಂಭವಿಸಿದ ದುರಂತದಲ್ಲಿ ಯಾರೂ ಮೃತಪಟ್ಟಿಲ್ಲ’ ಎಂದು ದೆಹಲಿಯ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಕೆಲವು ಮಕ್ಕಳು ಗಾಯಗೊಂಡಿದ್ದು, ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.</p>.<p class="title">‘ಬಾಬಾ ಖರಗ್ ಸಿಂಗ್ ಮಾರ್ಗದಲ್ಲಿರುವ ಬ್ರಹ್ಮಪುತ್ರ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮಧ್ಯಾಹ್ನ 1.22ಕ್ಕೆ ಕರೆಬಂದಿತ್ತು. ತಕ್ಷಣವೇ 14 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತೆರಳಿ, ಮಧ್ಯಾಹ್ನ 2.10ಕ್ಕೆ ಬೆಂಕಿ ನಂದಿಸಿದವು’ ಎಂದು ಹೇಳಿದ್ದಾರೆ.</p>.<p class="bodytext">2020ರಲ್ಲಿ ಈ ಅಪಾರ್ಟ್ಮೆಂಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.</p>.<p class="bodytext">‘ಕೆಲವರು ಪಟಾಕಿ ಸಿಡಿಸಿದ್ದರಿಂದ ಕೆಳಭಾಗದಲ್ಲಿ ಸೋಫಾಕ್ಕೆ ಬೆಂಕಿ ಹತ್ತಿಕೊಂಡಿತ್ತು. ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿತು’ ಎಂದು ಸ್ಥಳೀಯರು ತಿಳಿಸಿದ್ದಾರೆ. </p>.<p class="bodytext">ಕಟ್ಟಡದಲ್ಲಿ ಹೊಗೆ ದಟ್ಟೈಸಿರುವ ವಿಡಿಯೊಗಳು ಹರಿದಾಡಿವೆ.</p>.<p class="bodytext">‘ಕಟ್ಟಡದ ನೆಲಮಹಡಿಯಲ್ಲಿದ್ದ (ಸೆಲ್ಲಾರ್) ಸೋಫಾಕ್ಕೆ ಬೆಂಕಿ ಹತ್ತಿಕೊಂಡಿತ್ತು. ಹೊಗೆ ಮೇಲ್ಬಾಗಕ್ಕೆ ಆವರಿಸಿದ್ದರಿಂದ, ಮೇಲಿನ ಮಹಡಿಗಳಲ್ಲಿಯೂ ಹಾನಿ ಸಂಭವಿಸಿತು’ ಎಂದು ದೆಹಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಭೂಪೇಂದ್ರ ಪ್ರಕಾಶ್ ತಿಳಿಸಿದ್ದಾರೆ.</p>.<p class="bodytext">‘ಬೆಂಕಿ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ,</p>.<p class="bodytext">‘ನಾನು ಕೆಲಸ ಮಾಡುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿತು. ಆಭರಣ, ಬಟ್ಟೆ, ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳು ಬೆಂಕಿಗೆ ಆಹುತಿಯಾದವು’ ಎಂದು ಉತ್ತರಾಖಂಡ ಸಂಸದರೊಬ್ಬರ ಆಪ್ತ ಸಹಾಯಕ ಕಮಲ್ ತಿಳಿಸಿದ್ದಾರೆ.</p>.<p class="bodytext">‘ಕೆಳಹಂತದ ಮೂರು ಮಹಡಿಗಳಲ್ಲಿ ಸಂಸದರ ಆಪ್ತ ಸಹಾಯಕರು, ಸಿಬ್ಬಂದಿಗೆ ಮನೆಗಳನ್ನು ನೀಡಲಾಗಿತ್ತು. ನಾಲ್ಕನೇ ಮಹಡಿಯಿಂದ ಮೇಲ್ಭಾಗದಲ್ಲಿ ಸಂಸದರಿಗೆ ವಸತಿ ನೀಡಲಾಗಿತ್ತು. ಈಗ ಕೆಳಹಂತದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ನೌಕರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಅವರಿಗೆ ನೆರವಾಗಬೇಕು’ ಎಂದು ಅವರು ಮನವಿ ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>