ದಕ್ಷಿಣ ಭಾರತದಲ್ಲೇ ಎತ್ತುಗಳ (ಹೋರಿಗಳ) ಜಾತ್ರೆಗೆ ಹೆಸರಾಗಿರುವ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯಸ್ವಾಮಿ ದನಗಳ ತುಂಬು ಜಾತ್ರೆ ನಡೆಯುತ್ತಿದ್ದು, ಈಗಾಗಲೇ ದೂರದ ಊರುಗಳಿಂದ ಜಾತ್ರೆಗೆ ಹೋರಿಗಳೊಂದಿಗೆ ರೈತರು ಬರುತ್ತಿದ್ದಾರೆ. ಘಾಟಿ ಕ್ಷೇತ್ರದಲ್ಲಿ ರೈತರು ತಮ್ಮ ರಾಸುಗಳನ್ನು ವ್ಯಾಪಾರಕ್ಕಾಗಿ ಕಟ್ಟುವ ಸ್ಥಳದಲ್ಲಿ ಹೈಟೆಕ್ ಮಾದರಿಯ ಪೆಂಡಾಲ್ಗಳನ್ನು ಸಿದ್ಧಪಡಿಸಲಾಗಿದ್ದು. ಈ ಬಾರಿ ಹಳ್ಳಿಕಾರ್ ಹೋರಿ ಎಂಟೂವರೆ ಲಕ್ಷಕ್ಕೆ ಮಾರಾಟವಾಗಿ ಎಲ್ಲರ ಗಮನ ಸೆಳೆದಿದೆ.