<p><strong>ಬೆಂಗಳೂರು:</strong> ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ದೊರೆಸ್ವಾಮಿ ವಿರುದ್ಧ ಕೀಳು ಮಟ್ಟ ಹೇಳಿಕೆ ನೀಡಿದ ವಿಷಯ ಪ್ರಸ್ತಾಪ ಕ್ಕೆ ಅವಕಾಶ ನೀಡದ್ದನ್ನು ಪ್ರತಿಭಟಿಸಿ ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ಧರಣಿ ನಡೆಸಿದರು.</p>.<p>ಕಲಾಪ ಆರಂಭಗೊಂಡಾಗ ರಾಜ್ಯಪಾಲರ ಭಾಷಣದ ಮೇಲೆ ಮುಖ್ಯ ಮಂತ್ರಿ ಉತ್ತರ ನೀಡುವಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು. ಆದರೆ, ಅದಕ್ಕೆ ಮೊದಲು ಯತ್ನಾಳ ಕುರಿತ ವಿಷಯ ಪ್ರಸ್ತಾಪ ಕ್ಕೆ ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರು.</p>.<p>ವಿಷಯ ಪ್ರಸ್ತಾಪ ಕ್ಕೆ ನೋಟೊಸ್ ನೀಡಬೇಕು , ನೋಟಿಸ್ ನೀಡದೇ ವಿಷಯ ಪ್ರಸ್ತಾಪ ಮಾಡುವಂತಿಲ್ಲ, ಮೊದಲು ನೋಟಿಸ್ ಕೊಡಿ ಎಂದು ಸಭಾಧ್ಯಕ್ಷರು ತಿಳಿಸಿದರು.</p>.<p>ಸಿದ್ದರಾಮಯ್ಯ ಅದಕ್ಕೆ ಒಪ್ಪಲಿಲ್ಲ, ಸಭಾಧ್ಯಕ್ಷ ಕಾಗೇರಿ ಮುಖ್ಯ ಮಂತ್ರಿ ಉತ್ತರಕ್ಕೆ ಅವಕಾಶ ನೀಡಿದರು. ಇದನ್ನು ಪ್ರತಿಭಟಿಸಿ, ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಆರಂಭಿಸಿದರು. ಮುಖ್ಯಮಂತ್ರಿ ಉತ್ತರದ ಬಳಿಕ ಕಲಾಪವನ್ನು ಅರ್ಧಗಂಟೆ ಕಾಲ ಮುಂದೂಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ದೊರೆಸ್ವಾಮಿ ವಿರುದ್ಧ ಕೀಳು ಮಟ್ಟ ಹೇಳಿಕೆ ನೀಡಿದ ವಿಷಯ ಪ್ರಸ್ತಾಪ ಕ್ಕೆ ಅವಕಾಶ ನೀಡದ್ದನ್ನು ಪ್ರತಿಭಟಿಸಿ ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ಧರಣಿ ನಡೆಸಿದರು.</p>.<p>ಕಲಾಪ ಆರಂಭಗೊಂಡಾಗ ರಾಜ್ಯಪಾಲರ ಭಾಷಣದ ಮೇಲೆ ಮುಖ್ಯ ಮಂತ್ರಿ ಉತ್ತರ ನೀಡುವಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು. ಆದರೆ, ಅದಕ್ಕೆ ಮೊದಲು ಯತ್ನಾಳ ಕುರಿತ ವಿಷಯ ಪ್ರಸ್ತಾಪ ಕ್ಕೆ ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರು.</p>.<p>ವಿಷಯ ಪ್ರಸ್ತಾಪ ಕ್ಕೆ ನೋಟೊಸ್ ನೀಡಬೇಕು , ನೋಟಿಸ್ ನೀಡದೇ ವಿಷಯ ಪ್ರಸ್ತಾಪ ಮಾಡುವಂತಿಲ್ಲ, ಮೊದಲು ನೋಟಿಸ್ ಕೊಡಿ ಎಂದು ಸಭಾಧ್ಯಕ್ಷರು ತಿಳಿಸಿದರು.</p>.<p>ಸಿದ್ದರಾಮಯ್ಯ ಅದಕ್ಕೆ ಒಪ್ಪಲಿಲ್ಲ, ಸಭಾಧ್ಯಕ್ಷ ಕಾಗೇರಿ ಮುಖ್ಯ ಮಂತ್ರಿ ಉತ್ತರಕ್ಕೆ ಅವಕಾಶ ನೀಡಿದರು. ಇದನ್ನು ಪ್ರತಿಭಟಿಸಿ, ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಆರಂಭಿಸಿದರು. ಮುಖ್ಯಮಂತ್ರಿ ಉತ್ತರದ ಬಳಿಕ ಕಲಾಪವನ್ನು ಅರ್ಧಗಂಟೆ ಕಾಲ ಮುಂದೂಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>