<figcaption>""</figcaption>.<p><strong>ಚಿಂಚೋಳಿ (ಕಲಬುರ್ಗಿ ಜಿಲ್ಲೆ): </strong>ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯ ಭರ್ತಿಯಾಗಿದ್ದರಿಂದ ಹೆಚ್ಚುವರಿ ನೀರು ನದಿಗೆ ಬಿಡಲಾಗಿದೆ. ಇದರಿಂದ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಚಿಮ್ಮನಚೋಡ ಗ್ರಾಮದ ಭೋವಿ ಬಡಾವಣೆಯಲ್ಲಿ 25, ಕನಕಪುರದಲ್ಲಿ 10 ಮನೆಗಳಿಗೆ ನೀರು ನುಗ್ಗಿದೆ.</p>.<p>ಜಲಾಶಯದಿಂದ ಒಟ್ಟು 5 ಗೇಟುಗಳು ಎತ್ತಿ ಸುಮಾರು 20 ಸಾವಿರ ಕ್ಯುಸೆಕ್ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಗಿದೆ. ಎರಡು ಗೇಟುಗಳು ಐದು ಅಡಿ ಎತ್ತರ ಎತ್ತಿದ್ದರೆ, ಮೂರು ಗೇಟುಗಳು ಮೂರು ಅಡಿ ಎತ್ತರ ಎತ್ತಲಾಗಿದೆ.</p>.<p>ಒಳ ಹರಿವು ಹೆಚ್ಚಾಗಿರುವುದರಿಂದ ಅಷ್ಟೇ ಪ್ರಮಾಣದ ನೀರು ನದಿಗೆ ಬಿಡಲಾಗಿದೆ ಎಂದು ಕೆಳದಂಡೆ ಮುಲ್ಲಾಮಾರಿ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಣಮಂತ ಪೂಜಾರಿ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.</p>.<p>ಚಿಮ್ಮನಚೋಡ ಭೊವಿ ಬಡಾವಣೆಯಲ್ಲಿ ಜನರ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯಿಡಿ ಜಾಗರಣೆ ಮಾಡುವಂತಾಗಿದೆ ಜತೆಗೆ ದವಸ ಧಾನ್ಯ ಬಟ್ಟೆ ಬರೆಗಳು ಪ್ರವಾಹದ ನೀರಿಗೆ ಆಹುತಿಯಾಗಿವೆ. ಸಂಗಮೇಶ್ವರ ದೇವಾಲಯ ಮುಳುಗಿದ್ದು ಕೇವಲ ಗೋಪುರ ಹಾಗೂ ಛತ್ತು ಕೋಚರಿಸುತ್ತಿದೆ.</p>.<p>ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ನೆರವಿನಿಂದ ನಿರ್ಮಿಸಿದ ಪ್ರವಾಹ ನಿಯಂತ್ರಣ ಗೋಡೆಯೂ ಮುಳುಗಿದ್ದು ಭಾಗಶ: ಗೋಚರಿಸುತ್ತಿದೆ ಎಂದು ಬಿಜೆಪಿ ಮುಖಂಡ ರಾಮರೆಡ್ಡಿ ಪಾಟೀಲ ತಿಳಿಸಿದರು.</p>.<p>ಚಿಮ್ಮನಚೋಡ, ತಾಜಲಾಪುರ. ಗಾರಂಪಳ್ಳಿ ಹಾಗೂ ಚಂದಾಪುರ ಬ್ಯಾರೇಜು ಮುಳುಗಿದೆ.</p>.<p>‘ನನ್ನ ಮನೆ ಸಹಿತ ಕನಕಪುರದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ಹೊಕ್ಕಿದೆ. ಇದರಿಂದ ಕಾಳುಕಡಿಹಾಳಾಗಿವೆ’ ಎಂದು ದಲಿತ ಸೇನೆಯ ತಾಲ್ಲೂಕು ಉಪಾಧ್ಯಕ್ಷ ಶ್ರಿಧರ ವಗ್ಗಿ ತಿಳಿಸಿದ್ದಾರೆ.</p>.<div style="text-align:center"><figcaption><strong>ಚಿಂಚೋಳಿ ತಾಲ್ಲೂಕು ಚಿಮ್ಮನಚೋಡ ಗ್ರಾಮದ ಸಂಗಮೇಶ್ವರ ದೇವಾಲಯ ಮುಳುಗಿರುವುದು</strong></figcaption></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ಚಿಂಚೋಳಿ (ಕಲಬುರ್ಗಿ ಜಿಲ್ಲೆ): </strong>ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯ ಭರ್ತಿಯಾಗಿದ್ದರಿಂದ ಹೆಚ್ಚುವರಿ ನೀರು ನದಿಗೆ ಬಿಡಲಾಗಿದೆ. ಇದರಿಂದ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಚಿಮ್ಮನಚೋಡ ಗ್ರಾಮದ ಭೋವಿ ಬಡಾವಣೆಯಲ್ಲಿ 25, ಕನಕಪುರದಲ್ಲಿ 10 ಮನೆಗಳಿಗೆ ನೀರು ನುಗ್ಗಿದೆ.</p>.<p>ಜಲಾಶಯದಿಂದ ಒಟ್ಟು 5 ಗೇಟುಗಳು ಎತ್ತಿ ಸುಮಾರು 20 ಸಾವಿರ ಕ್ಯುಸೆಕ್ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಗಿದೆ. ಎರಡು ಗೇಟುಗಳು ಐದು ಅಡಿ ಎತ್ತರ ಎತ್ತಿದ್ದರೆ, ಮೂರು ಗೇಟುಗಳು ಮೂರು ಅಡಿ ಎತ್ತರ ಎತ್ತಲಾಗಿದೆ.</p>.<p>ಒಳ ಹರಿವು ಹೆಚ್ಚಾಗಿರುವುದರಿಂದ ಅಷ್ಟೇ ಪ್ರಮಾಣದ ನೀರು ನದಿಗೆ ಬಿಡಲಾಗಿದೆ ಎಂದು ಕೆಳದಂಡೆ ಮುಲ್ಲಾಮಾರಿ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಣಮಂತ ಪೂಜಾರಿ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.</p>.<p>ಚಿಮ್ಮನಚೋಡ ಭೊವಿ ಬಡಾವಣೆಯಲ್ಲಿ ಜನರ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯಿಡಿ ಜಾಗರಣೆ ಮಾಡುವಂತಾಗಿದೆ ಜತೆಗೆ ದವಸ ಧಾನ್ಯ ಬಟ್ಟೆ ಬರೆಗಳು ಪ್ರವಾಹದ ನೀರಿಗೆ ಆಹುತಿಯಾಗಿವೆ. ಸಂಗಮೇಶ್ವರ ದೇವಾಲಯ ಮುಳುಗಿದ್ದು ಕೇವಲ ಗೋಪುರ ಹಾಗೂ ಛತ್ತು ಕೋಚರಿಸುತ್ತಿದೆ.</p>.<p>ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ನೆರವಿನಿಂದ ನಿರ್ಮಿಸಿದ ಪ್ರವಾಹ ನಿಯಂತ್ರಣ ಗೋಡೆಯೂ ಮುಳುಗಿದ್ದು ಭಾಗಶ: ಗೋಚರಿಸುತ್ತಿದೆ ಎಂದು ಬಿಜೆಪಿ ಮುಖಂಡ ರಾಮರೆಡ್ಡಿ ಪಾಟೀಲ ತಿಳಿಸಿದರು.</p>.<p>ಚಿಮ್ಮನಚೋಡ, ತಾಜಲಾಪುರ. ಗಾರಂಪಳ್ಳಿ ಹಾಗೂ ಚಂದಾಪುರ ಬ್ಯಾರೇಜು ಮುಳುಗಿದೆ.</p>.<p>‘ನನ್ನ ಮನೆ ಸಹಿತ ಕನಕಪುರದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ಹೊಕ್ಕಿದೆ. ಇದರಿಂದ ಕಾಳುಕಡಿಹಾಳಾಗಿವೆ’ ಎಂದು ದಲಿತ ಸೇನೆಯ ತಾಲ್ಲೂಕು ಉಪಾಧ್ಯಕ್ಷ ಶ್ರಿಧರ ವಗ್ಗಿ ತಿಳಿಸಿದ್ದಾರೆ.</p>.<div style="text-align:center"><figcaption><strong>ಚಿಂಚೋಳಿ ತಾಲ್ಲೂಕು ಚಿಮ್ಮನಚೋಡ ಗ್ರಾಮದ ಸಂಗಮೇಶ್ವರ ದೇವಾಲಯ ಮುಳುಗಿರುವುದು</strong></figcaption></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>