* 1933ರ ಆಗಸ್ಟ್ 26ರಂದು ಮೈಸೂರಿನಲ್ಲಿ ಜನಿಸಿರುವ ವೆಂಕಟಾಚಲಶಾಸ್ತ್ರೀ ಅವರು ಮೈಸೂರಿನಲ್ಲಿ ಓದು ಮುಗಿಸಿದರು. ನಂತರ 1968ರಿಂದ 1994ರ ವರೆಗೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿ ನಿವೃತ್ತರಾದರು. ಹಳಗನ್ನಡ, ಶಾಸ್ತ್ರಸಾಹಿತ್ಯ ಇವರ ಪ್ರಿಯವಾದ ಕ್ಷೇತ್ರ. 130ಕ್ಕೂ ಅಧಿಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಭಾಷಾ ಸಮ್ಮಾನ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಪಂಪ, ನೃಪತುಂಗ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.