<p><strong>ಬೆಂಗಳೂರು:</strong> ವೈದ್ಯಕೀಯ ಪದವಿ ಕೋರ್ಸುಗಳಿಗೆ ಸೆ.14ರಿಂದ 20ರವರೆಗೆ ಆನ್ಲೈನ್ನಲ್ಲಿ ಮಾಪ್ಅಪ್ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ.</p>.<p>ಸೀಟು ಹಂಚಿಕೆಯ ನಂತರ ಉಳಿದಿರುವ 1,213 ಸೀಟುಗಳಿಗೆ ಮಾತ್ರ ಈ ಪ್ರಕ್ರಿಯೆ ನಡೆಯಲಿದೆ. 12 ಸರ್ಕಾರಿ, 446 ಖಾಸಗಿ ಹಾಗೂ 755 ಆಡಳಿತ ಮಂಡಳಿ/ಎನ್ಆರ್ಐ ಕೋಟಾದ ಸೀಟುಗಳು. ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ಜಾಲತಾಣವನ್ನು ನೋಡಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.</p>.<p>ಎರಡು ಸುತ್ತುಗಳಲ್ಲಿ ಸೀಟು ಪಡೆದವರು ಮಾಪ್ಅಪ್ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವಂತಿಲ್ಲ. ಹಾಗೆಯೇ, ಪ್ರಾಧಿಕಾರದ ಮೂಲಕ ದಂತ ವೈದ್ಯಕೀಯ ಸೀಟು ಪಡೆದವರು ಮಾಪ್ಅಪ್ನಲ್ಲಿ ವೈದ್ಯಕೀಯ ಪದವಿ ಸೀಟುಗಳಿಗಾಗಿ ಭಾಗವಹಿಸಬಹುದು. ಮಾಪ್ಅಪ್ನಲ್ಲಿ ಭಾಗವಹಿಸುವವರು ₹ 1 ಲಕ್ಷ ಮುಂಜಾಗ್ರತಾ ಶುಲ್ಕ ಪಾವತಿಸಬೇಕು. ಮುಂಜಾಗ್ರತಾ ಶುಲ್ಕ ಕಟ್ಟಿದ ನಂತರವೇ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆ ನಮೂದಿಸಲು ಅವಕಾಶ ಕೊಡಲಾಗುವುದು.</p>.<p>ಸೀಟು ಪಡೆದುಕೊಂಡ ಅಭ್ಯರ್ಥಿಗಳು ನಿಗದಿತ ಕಾಲೇಜಿನಲ್ಲಿ ಪ್ರವೇಶ ಪಡೆಯದಿದ್ದರೆ ಶುಲ್ಕ ಹಿಂದಿರುಗಿಸುವುದಿಲ್ಲ. ಅಂಥವರು ಉಳಿದ ಶುಲ್ಕವನ್ನೂ ಭರಿಸಬೇಕಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವೈದ್ಯಕೀಯ ಪದವಿ ಕೋರ್ಸುಗಳಿಗೆ ಸೆ.14ರಿಂದ 20ರವರೆಗೆ ಆನ್ಲೈನ್ನಲ್ಲಿ ಮಾಪ್ಅಪ್ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ.</p>.<p>ಸೀಟು ಹಂಚಿಕೆಯ ನಂತರ ಉಳಿದಿರುವ 1,213 ಸೀಟುಗಳಿಗೆ ಮಾತ್ರ ಈ ಪ್ರಕ್ರಿಯೆ ನಡೆಯಲಿದೆ. 12 ಸರ್ಕಾರಿ, 446 ಖಾಸಗಿ ಹಾಗೂ 755 ಆಡಳಿತ ಮಂಡಳಿ/ಎನ್ಆರ್ಐ ಕೋಟಾದ ಸೀಟುಗಳು. ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ಜಾಲತಾಣವನ್ನು ನೋಡಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.</p>.<p>ಎರಡು ಸುತ್ತುಗಳಲ್ಲಿ ಸೀಟು ಪಡೆದವರು ಮಾಪ್ಅಪ್ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವಂತಿಲ್ಲ. ಹಾಗೆಯೇ, ಪ್ರಾಧಿಕಾರದ ಮೂಲಕ ದಂತ ವೈದ್ಯಕೀಯ ಸೀಟು ಪಡೆದವರು ಮಾಪ್ಅಪ್ನಲ್ಲಿ ವೈದ್ಯಕೀಯ ಪದವಿ ಸೀಟುಗಳಿಗಾಗಿ ಭಾಗವಹಿಸಬಹುದು. ಮಾಪ್ಅಪ್ನಲ್ಲಿ ಭಾಗವಹಿಸುವವರು ₹ 1 ಲಕ್ಷ ಮುಂಜಾಗ್ರತಾ ಶುಲ್ಕ ಪಾವತಿಸಬೇಕು. ಮುಂಜಾಗ್ರತಾ ಶುಲ್ಕ ಕಟ್ಟಿದ ನಂತರವೇ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆ ನಮೂದಿಸಲು ಅವಕಾಶ ಕೊಡಲಾಗುವುದು.</p>.<p>ಸೀಟು ಪಡೆದುಕೊಂಡ ಅಭ್ಯರ್ಥಿಗಳು ನಿಗದಿತ ಕಾಲೇಜಿನಲ್ಲಿ ಪ್ರವೇಶ ಪಡೆಯದಿದ್ದರೆ ಶುಲ್ಕ ಹಿಂದಿರುಗಿಸುವುದಿಲ್ಲ. ಅಂಥವರು ಉಳಿದ ಶುಲ್ಕವನ್ನೂ ಭರಿಸಬೇಕಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>