ಸಾಹಿತ್ಯ ಲೋಕಕ್ಕೆ ಕೂಡ ಅನನ್ಯವಾದ ಕೊಡುಗೆ ನೀಡಿದ್ದಾರೆ. 1960ರಲ್ಲೇ ಪುತ್ತೂರಿನಿಂದ ‘ವಿಚಾರವಾಣಿ’ ಸಾಹಿತ್ಯ ಪತ್ರಿಕೆಯನ್ನು ಹೊರತಂದು, ವಿವಿಧ ಲೇಖಕರಿಗೆ, ಯುವ ಕವಿಗಳಿಗೆ ಪ್ರೋತ್ಸಾಹಿಸಿದ್ದರು. ‘ಸುಧಾ’ ವಾರಪತ್ರಿಕೆಯಲ್ಲಿ ಪತ್ನಿ ಸಬಿತಾ ಅವರೊಂದಿಗೆ ‘ಅಜ್ಜಿ ಮದ್ದು’ ಅಂಕಣ ಬರೆಯುತ್ತಿದ್ದರು. ಅವರು ‘ವಿಷಚಿಕಿತ್ಸೆ’, ‘ಅಲೆಮಾರಿಯ ಆತ್ಮಕಥೆ’, ‘ಬರಗಾಲದಲ್ಲಿ ಧನ್ವಂತರಿ’, ‘ಮೊಗಲಾಯರ ಮಧ್ಯೆ ಧನ್ವಂತರಿ’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.