ನಂಜುಂಡಪ್ಪ ಆಯೋಗದ ವರದಿಯಂತೆ ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಕನಕಪುರವೂ ಒಂದು. ಇಲ್ಲಿನ ಕೃಷಿ ಬಹುತೇಕ ಮಳೆ ಆಶ್ರಿತವಾಗಿದ್ದು, ತಾಲ್ಲೂಕು ನಿರಂತರವಾಗಿ ಬರಕ್ಕೆ ಸಿಲುಕುತ್ತಿದೆ. ಇಂತಹ ಪ್ರದೇಶದಲ್ಲಿ ನರೇಗಾದ ಅಡಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕೃಷಿ ಹೊಂಡ ಹಾಗೂ ಚೆಕ್ ಡ್ಯಾಮ್ಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಇಲ್ಲಿನ ಅಂತರ್ಜಲ ಮಟ್ಟ ವೃದ್ಧಿಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.