‘ದಸರಾ ಅಂಬಾರಿ ಹೊರುವ ಅಭಿಮನ್ಯು ಸಾರಥ್ಯದಲ್ಲಿ ಈ ಬಾರಿ ಆನೆ ಸೆರೆ ಕಾರ್ಯಾಚರಣೆ ನಡೆಯಲಿದೆ. ಜಿಲ್ಲೆಯಲ್ಲಿ 20–25 ಆನೆಗಳ ಗುಂಪು ಓಡಾಡುತ್ತಿದ್ದು, ಇವುಗಳ ಪೈಕಿ ಸಾಕಷ್ಟು ಆನೆಗಳನ್ನು ಆಗಸ್ಟ್ನಲ್ಲಿ ಕಾಡಿಗೆ ಅಟ್ಟಲಾಗಿತ್ತು. ಇನ್ನೂ 5–6 ಆನೆಗಳು ಗ್ರಾಮಗಳ ಆಸುಪಾಸು ತಿರುಗಾಡುತ್ತಿದ್ದು, ಅವುಗಳನ್ನು ಓಡಿಸಲು ಹಾಗೂ ಅಗತ್ಯಬಿದ್ದಲ್ಲಿ ಸೆರೆ ಹಿಡಿಯಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.