ಈ ವಿಷಯದ ಬಗ್ಗೆ ಅರಣ್ಯ ಇಲಾಖೆಯು ವನ್ಯಜೀವಿ ಮಂಡಳಿ ಮಂಡಳಿ ಸದಸ್ಯರು, ನಿವೃತ್ತ ಅಧಿಕಾರಿಗಳು ಹಾಗೂ ಗೌರವ ವನ್ಯಜೀವಿ ಪರಿಪಾಲಕರ ಜತೆಗೆ ಸೋಮವಾರ ಸಮಾಲೋಚನೆ ನಡೆಸಿತು. ‘ಈ ಕಲ್ಪನೆ ಅವೈಜ್ಞಾನಿಕ. ಇದರಿಂದ ಕಾನೂನು ಉಲ್ಲಂಘಿಸಲು ದಾರಿ ಮಾಡಿಕೊಟ್ಟಂತೆ ಆಗುತ್ತದೆ’ ಎಂದು ಐಎಫ್ಎಸ್ ಅಧಿಕಾರಿಗಳು ಹಾಗೂ ನಿವೃತ್ತ ಅಧಿಕಾರಿಗಳು ಪ್ರತಿಪಾದಿಸಿದರು. ‘ವನ್ಯಜೀವಿ ಧಾಮಗಳನ್ನು ಆರಂಭಿಸಿದರೆ ಮಾನವ–ಪ್ರಾಣಿ ಸಂಘರ್ಷ ಕಡಿಮೆಯಾಗಲಿದೆ’ ಎಂದು ಹಲವು ಪರಿಸರವಾದಿಗಳು ಅಭಿಪ್ರಾಯಪಟ್ಟರು.