ಈ ಬಗ್ಗೆ ಗೃಹಸಚಿವರಿಗೆ ಪತ್ರ ಬರೆ ದಿರುವ ಅವರು, ‘2014ನೇ ಸಾಲಿನ ಎಪಿಪಿ ನೇಮಕಾತಿಯಲ್ಲಿ ಅಕ್ರಮ ನಡೆ ದಿದ್ದು, ಈ ಸಂಬಂಧ 64 ಮಂದಿ ವಿರುದ್ಧ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಆರೋಪಿಗಳ ಜೊತೆ ಶಾಮೀಲಾಗಿರುವ ತನಿಖಾಧಿಕಾರಿ, ಕೆಲ ವಕೀಲರ ಹೆಸ ರನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಪ್ರತ್ಯೇಕ ತನಿಖೆ ಆರಂಭಿಸಿದೆ. ಈ ಮಧ್ಯೆಯೇ ಎಪಿಪಿಗಳಿಗೆ ಬಡ್ತಿ ನೀಡುತ್ತಿರುವುದು ಸರಿಯಲ್ಲ’ ಎಂದು ಈಶ್ವರಪ್ಪ ಹೇಳಿದ್ದಾರೆ.