ಬೆಂಗಳೂರು: ಕೋವಿಡ್ ನಡುವೆಯೂ ಸಿದ್ಧಲಿಂಗಯ್ಯ ಅವರ ನೂರಾರು ಅಭಿಮಾನಿಗಳು ಅಂತಿಮ ದರ್ಶನಕ್ಕೆ ದೌಡಾಯಿಸುತ್ತಿದ್ದಾರೆ. ಸಿದ್ಧಲಿಂಗಯ್ಯ ಅವರ ರಚನೆಯ ಹೋರಾಡದ ಗೀತೆಗಳನ್ನು ಹೇಳುತ್ತಾ ಅಂತಿಮ ನಮನ ಸಲ್ಲಿಸಲಾಗುತ್ತಿದೆ.
'ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ, ಆಕಾಶದ ಅಗಲಕ್ಕೂ ನಿಂತ ಆಲವೇ' ಎಂದು ಅಂಬೇಡ್ಕರ್ ಅವರ ಕುರಿತು ಸಿದ್ಧಲಿಂಗಯ್ಯ ಅವರು ಬರೆದ ಸಾಲುಗಳನ್ನು ಅವರಿಗೇ ಅನ್ವಯಿಸಿ ಹಾಡುವ ಮೂಲಕ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ