ಸಂತ್ರಸ್ತೆಯ ಪರ ಹಾಜರಿದ್ದ ವಕೀಲ ರಾಜೇಶ್ ಮಹಾಲೆ, ‘ಪ್ರಕರಣದ ಪ್ರತಿವಾದಿಗಳಾದ ಗಿರಿನಗರ ಠಾಣಾಧಿಕಾರಿ, ಅನಂತಣ್ಣ ಅಲಿಯಾಸ್ ಅನಂತ ಭಟ್, ಬಿ.ಆರ್.ಸುಬ್ರಹ್ಮಣ್ಯ ಅಲಿಯಾಸ್ ಸುಧಾಕರ, ಮಧುಕರ ಅಲಿಯಾಸ್ ಮಧುಕರ ಶಿವಯ್ಯ ಹೆಬ್ಬಾರ್ ಮತ್ತು ಜಗದೀಶ ಶರ್ಮ ಅಲಿಯಾಸ್ ಸಿ.ಜಗದೀಶ ಅವರಿಗೆ ನೋಟಿಸ್ ಜಾರಿಯಾಗಿಲ್ಲ’ ಎಂಬ ಅಂಶವನ್ನು ಗಮನಕ್ಕೆ ತಂದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ನೋಟಿಸ್ ಜಾರಿಗೊಳಿಸಲು ತಾಕೀತು ಮಾಡಿದೆ.