ಇವುಗಳನ್ನು ರಾಜು, ಅಪ್ಪಾಸ್ವಾಮಿ ಮತ್ತು ಚಕ್ರವರ್ತಿ ಎಂಬುವರಿಗೆ ಮಾರಾಟ ಮಾಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆಯೇ, ಕಟ್ಟಡ ಕೆಡವಲು ಗುತ್ತಿಗೆ ಪಡೆದಿದ್ದ ಮೊಹಮ್ಮದ್ ವಾಸಿಂ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು ಚಕ್ರವರ್ತಿಯಿಂದ ವಜ್ರದ ಹರಳುಗಳನ್ನು ವಶಕ್ಕೆ ಪಡೆದಿದ್ದರು. ಇದಾದ ಹಲವು ವರ್ಷಗಳ ಬಳಿಕ ಚಕ್ರವರ್ತಿ ಸಾವನ್ನಪ್ಪಿದ್ದರು.