<p><strong>ಬೆಂಗಳೂರು:</strong> ಮೂರು ದಶಕಗಳ ಹಿಂದೆ ನಗರದ ಕೆ.ಎಚ್.ರಸ್ತೆಯ ಹಳೆಯ ಕಟ್ಟಡವೊಂದರ ಗೋಡೆಯಲ್ಲಿ ಪತ್ತೆಯಾಗಿದ್ದ ಸಾವಿರಕ್ಕೂ ಹೆಚ್ಚು ವಜ್ರದ ಹರಳುಗಳನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.</p>.<p>ಈ ಸಂಬಂಧ ತಮಿಳುನಾಡಿನ ಧರ್ಮಪುರ ಜಿಲ್ಲೆಯ ಕಡತ್ತೂರು ನಿವಾಸಿ ಉಮಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಜಾ ಮಾಡಿದೆ.</p>.<p>ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಟಿ.ಎಸ್.ಮಹಾಂತೇಶ್, ‘ಟ್ರೆಷರ್ ಟ್ರೋವ್ ಅಧಿನಿಯಮದ ಪ್ರಕಾರ, ನಿಧಿ ದೊರೆತ ಸ್ಥಳದ ಮಾಲೀಕ ಅಥವಾ ನಿಧಿ ಪತ್ತೆ ಹಚ್ಚುವವರಿಗೆ ಮಾತ್ರ ದೊರೆತ ನಿಧಿಯಲ್ಲಿ ಪಾಲು ಕೊಡಬೇಕಿದೆ’ ಎಂದು ತಿಳಿಸಿದರು.</p>.<p>‘ಪ್ರಕರಣದಲ್ಲಿ ಅರ್ಜಿದಾರರು ನಿಧಿ ದೊರೆತ ಸ್ಥಳದ ಮಾಲೀಕರೂ ಅಲ್ಲ ಅಥವಾ ನಿಧಿ ಪತ್ತೆ ಹಚ್ಚಿದವರೂ ಅಲ್ಲ. ಹೀಗಾಗಿ, ಅವರಿಗೆ ಹರಳು ನೀಡಲು ಅವಕಾಶವಿಲ್ಲ’ ಎಂದು ವಾದ ಮಂಡಿಸಿದರು.</p>.<p>ಈ ವಾದ ಪುರಸ್ಕರಿಸಿದ ನ್ಯಾಯಪೀಠವು ಅರ್ಜಿ ವಜಾಗೊಳಿಸಿದೆ.</p>.<p>ವಜ್ರದ ಹರಳುಗಳ ಒಟ್ಟು ಮೌಲ್ಯ ₹ 22 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿತ್ತು.</p>.<p><strong>ಪ್ರಕರಣವೇನು?:</strong> 1988ರಲ್ಲಿ ನಗರದ ಕೆ.ಎಚ್.ರಸ್ತೆಯ ಹಳೆಯ ಕಟ್ಟಡವೊಂದನ್ನು ನೆಲಸಮಗೊಳಿಸಲಾಗಿತ್ತು. ಕಟ್ಟಡದ ಗೋಡೆ ಕೆಡವಿದಾಗ ಕೂಲಿ ಕಾರ್ಮಿಕ ರಾಜು ಎಂಬುವರಿಗೆ 84 ಕ್ಯಾರೆಟ್ ಹಾಗೂ 97 ಸೆಂಟ್ಗಳ 1,246 ಬಿಳಿಯ ವಜ್ರದ ಹರಳು ಪತ್ತೆಯಾಗಿದ್ದವು.</p>.<p>ಇವುಗಳನ್ನು ರಾಜು, ಅಪ್ಪಾಸ್ವಾಮಿ ಮತ್ತು ಚಕ್ರವರ್ತಿ ಎಂಬುವರಿಗೆ ಮಾರಾಟ ಮಾಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆಯೇ, ಕಟ್ಟಡ ಕೆಡವಲು ಗುತ್ತಿಗೆ ಪಡೆದಿದ್ದ ಮೊಹಮ್ಮದ್ ವಾಸಿಂ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು ಚಕ್ರವರ್ತಿಯಿಂದ ವಜ್ರದ ಹರಳುಗಳನ್ನು ವಶಕ್ಕೆ ಪಡೆದಿದ್ದರು. ಇದಾದ ಹಲವು ವರ್ಷಗಳ ಬಳಿಕ ಚಕ್ರವರ್ತಿ ಸಾವನ್ನಪ್ಪಿದ್ದರು.</p>.<p>ನಂತರ ಚಕ್ರವರ್ತಿಯ ಪತ್ನಿ ಉಮಾ, ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಪತಿಯಿಂದ ವಶಕ್ಕೆ ಪಡೆದಿದ್ದ ವಜ್ರದ ಹರಳುಗಳನ್ನು, ‘ನನ್ನ ವಶಕ್ಕೆ ಕೊಡಿ’ ಎಂದು ಕೋರಿದ್ದರು.</p>.<p>ಈ ಅರ್ಜಿಯನ್ನು ಜಿಲ್ಲಾಧಿಕಾರಿ 2009ರ ಡಿಸೆಂಬರ್ 15ರಂದು ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಉಮಾ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮೂರು ದಶಕಗಳ ಹಿಂದೆ ನಗರದ ಕೆ.ಎಚ್.ರಸ್ತೆಯ ಹಳೆಯ ಕಟ್ಟಡವೊಂದರ ಗೋಡೆಯಲ್ಲಿ ಪತ್ತೆಯಾಗಿದ್ದ ಸಾವಿರಕ್ಕೂ ಹೆಚ್ಚು ವಜ್ರದ ಹರಳುಗಳನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.</p>.<p>ಈ ಸಂಬಂಧ ತಮಿಳುನಾಡಿನ ಧರ್ಮಪುರ ಜಿಲ್ಲೆಯ ಕಡತ್ತೂರು ನಿವಾಸಿ ಉಮಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಜಾ ಮಾಡಿದೆ.</p>.<p>ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಟಿ.ಎಸ್.ಮಹಾಂತೇಶ್, ‘ಟ್ರೆಷರ್ ಟ್ರೋವ್ ಅಧಿನಿಯಮದ ಪ್ರಕಾರ, ನಿಧಿ ದೊರೆತ ಸ್ಥಳದ ಮಾಲೀಕ ಅಥವಾ ನಿಧಿ ಪತ್ತೆ ಹಚ್ಚುವವರಿಗೆ ಮಾತ್ರ ದೊರೆತ ನಿಧಿಯಲ್ಲಿ ಪಾಲು ಕೊಡಬೇಕಿದೆ’ ಎಂದು ತಿಳಿಸಿದರು.</p>.<p>‘ಪ್ರಕರಣದಲ್ಲಿ ಅರ್ಜಿದಾರರು ನಿಧಿ ದೊರೆತ ಸ್ಥಳದ ಮಾಲೀಕರೂ ಅಲ್ಲ ಅಥವಾ ನಿಧಿ ಪತ್ತೆ ಹಚ್ಚಿದವರೂ ಅಲ್ಲ. ಹೀಗಾಗಿ, ಅವರಿಗೆ ಹರಳು ನೀಡಲು ಅವಕಾಶವಿಲ್ಲ’ ಎಂದು ವಾದ ಮಂಡಿಸಿದರು.</p>.<p>ಈ ವಾದ ಪುರಸ್ಕರಿಸಿದ ನ್ಯಾಯಪೀಠವು ಅರ್ಜಿ ವಜಾಗೊಳಿಸಿದೆ.</p>.<p>ವಜ್ರದ ಹರಳುಗಳ ಒಟ್ಟು ಮೌಲ್ಯ ₹ 22 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿತ್ತು.</p>.<p><strong>ಪ್ರಕರಣವೇನು?:</strong> 1988ರಲ್ಲಿ ನಗರದ ಕೆ.ಎಚ್.ರಸ್ತೆಯ ಹಳೆಯ ಕಟ್ಟಡವೊಂದನ್ನು ನೆಲಸಮಗೊಳಿಸಲಾಗಿತ್ತು. ಕಟ್ಟಡದ ಗೋಡೆ ಕೆಡವಿದಾಗ ಕೂಲಿ ಕಾರ್ಮಿಕ ರಾಜು ಎಂಬುವರಿಗೆ 84 ಕ್ಯಾರೆಟ್ ಹಾಗೂ 97 ಸೆಂಟ್ಗಳ 1,246 ಬಿಳಿಯ ವಜ್ರದ ಹರಳು ಪತ್ತೆಯಾಗಿದ್ದವು.</p>.<p>ಇವುಗಳನ್ನು ರಾಜು, ಅಪ್ಪಾಸ್ವಾಮಿ ಮತ್ತು ಚಕ್ರವರ್ತಿ ಎಂಬುವರಿಗೆ ಮಾರಾಟ ಮಾಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆಯೇ, ಕಟ್ಟಡ ಕೆಡವಲು ಗುತ್ತಿಗೆ ಪಡೆದಿದ್ದ ಮೊಹಮ್ಮದ್ ವಾಸಿಂ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು ಚಕ್ರವರ್ತಿಯಿಂದ ವಜ್ರದ ಹರಳುಗಳನ್ನು ವಶಕ್ಕೆ ಪಡೆದಿದ್ದರು. ಇದಾದ ಹಲವು ವರ್ಷಗಳ ಬಳಿಕ ಚಕ್ರವರ್ತಿ ಸಾವನ್ನಪ್ಪಿದ್ದರು.</p>.<p>ನಂತರ ಚಕ್ರವರ್ತಿಯ ಪತ್ನಿ ಉಮಾ, ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಪತಿಯಿಂದ ವಶಕ್ಕೆ ಪಡೆದಿದ್ದ ವಜ್ರದ ಹರಳುಗಳನ್ನು, ‘ನನ್ನ ವಶಕ್ಕೆ ಕೊಡಿ’ ಎಂದು ಕೋರಿದ್ದರು.</p>.<p>ಈ ಅರ್ಜಿಯನ್ನು ಜಿಲ್ಲಾಧಿಕಾರಿ 2009ರ ಡಿಸೆಂಬರ್ 15ರಂದು ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಉಮಾ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>