‘ತಾಯಿಯ ಕನಸನ್ನು ನನಸು ಮಾಡುವುದಕ್ಕಾಗಿ ಕೃಷಿಯಲ್ಲಿ ಏನಾದರೂ ಸಾಧನೆ ಮಾಡುವ ಮಹದಾಸೆ ಇಟ್ಟುಕೊಂಡು ಕಠಿಣ ಪರಿಶ್ರಮಪಟ್ಟು ಓದಿದ್ದೇನೆ. ಈ ಕಾರಣದಿಂದ ನನಗೆ ಚಿನ್ನದ ಗೌರವ ಸಿಕ್ಕಿದೆ. ಸದ್ಯ ದೆಹಲಿಯ ಐಸಿಎಆರ್ನಲ್ಲಿ ಕೃಷಿ ಸ್ನಾತಕೋತ್ತರ ಓದುತ್ತಿದ್ದೇನೆ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೃಷಿ ಸಂಶೋಧನೆ ಕೈಗೊಳ್ಳುವುದು ನನ್ನ ಉದ್ದೇಶ. ಕೃಷಿ ವಿಜ್ಞಾನಿಯಾಗಿ, ನನ್ನದೇ ಆದ ಕೊಡುಗೆ ನೀಡುತ್ತೇನೆ’ ಎಂದು ಆತ್ಮವಿಶ್ವಾಸದಿಂದ ನುಡಿದರು.