‘ಬೇರೆಯವರಿಗೆ ಸಣ್ಣ ಸಂತೋಷ ಉಂಟುಮಾಡುವುದು ಕೂಡ ಸೇವೆಯಂತೆಯೇ. ಹೀಗಾಗಿ ವೃದ್ಧರಿಗೆ, ಅನಾಥರಿಗೆ, ವಿದ್ಯಾರ್ಥಿಗಳಿಗೆ ಕೈಲಾದಷ್ಟು ಸಹಾಯ ಮಾಡಿದರೆ ಅದು ರಾಮಸೇವೆಯಾಗುತ್ತದೆ. ವೈದ್ಯ, ವಕೀಲ, ಶಿಕ್ಷಕ ಸೇರಿ ವೃತ್ತಿಯಲ್ಲಿರುವವರು ತಲಾ 10 ಜನರಿಗೆ ಉಚಿತ ಸೇವೆ ನೀಡಬಹುದು. ಉದ್ಯಮಿಗಳು ಮನೆ ಕಟ್ಟಿಕೊಡಬಹುದು. ಒಳ್ಳೆಯ ಕೆಲಸ ಮಾಡಿ, ಅದನ್ನು ರಾಮನಿಗೆ ಸಮರ್ಪಣೆ ಮಾಡಬೇಕು’ ಎಂದರು.