ಶುಕ್ರವಾರ ಟ್ವೀಟ್ ಮಾಡಿರುವ ಅವರು, ‘ಏನೋ ಒಂದು ಒಳ್ಳೆಯದಾಗಿದೆ. ಇನ್ನು ನಿಮ್ಮದೇ ಮೂಲಗಳಿಂದ ಮಾಹಿತಿ ಪಡೆದು ಪರಿಶೀಲಿಸಿ. ಯೋಜನಾ ವೆಚ್ಚದಲ್ಲಿ ಶೇ 45ರಿಂದ 50ರಷ್ಟು ಕೇಳುವವರು ಮತ್ತು ಅದೇ ಯೋಜನೆಗಳಲ್ಲಿ ತಮ್ಮನ್ನೂ ಪಾಲುದಾರರನ್ನಾಗಿ ಮಾಡುವಂತೆ ಬೇಡಿಕೆ ಇಡುವವರನ್ನು ಸಂಪುಟಕ್ಕೆ ಸೇರಿಸಬೇಡಿ. ಅದು ನೀವು ಕರ್ನಾಟಕದ ಒಳಿತಿಗಾಗಿ ಮಾಡುವ ಕೆಲಸವಾಗುತ್ತದೆ’ ಎಂದು ಒತ್ತಾಯಿಸಿದ್ದಾರೆ.